Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಳ್ತಂಗಡಿ: ಭಾರೀ ಮಳೆ ; ನದಿಹಳ್ಳಗಳಲ್ಲಿ...

ಬೆಳ್ತಂಗಡಿ: ಭಾರೀ ಮಳೆ ; ನದಿಹಳ್ಳಗಳಲ್ಲಿ ಉಕ್ಕಿ ಹರಿದ ನೀರು

ವಾರ್ತಾಭಾರತಿವಾರ್ತಾಭಾರತಿ1 Jun 2020 11:17 PM IST
share
ಬೆಳ್ತಂಗಡಿ: ಭಾರೀ ಮಳೆ ; ನದಿಹಳ್ಳಗಳಲ್ಲಿ ಉಕ್ಕಿ ಹರಿದ ನೀರು

ಬೆಳ್ತಂಗಡಿ : ತಾಲೂಕಿನಲ್ಲಿ ರವಿವಾರ ಸಂಜೆಯಿಂದ ಮಳೆ ಆರಂಭಗೊಂಡಿದ್ದು ಇಂದೂ ಮುಂದುವರಿದಿದೆ. ಆಗಾಗ ದೊಡ್ಡ ಮಳೆ ಸುರಿಯುತ್ತಿದ್ದು ನದಿಹಳ್ಳಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು ಜನರಲ್ಲಿ ಭಯ ಮೂಡಿಸಿದೆ. ಇದರ ನಡುವೆಯೇ ಕಳೆದ ವರ್ಷದ ಪ್ರಳಯದ ವೀಡಿಯೊಗಳು ಸಾಮಾಜಿಕ ಜಾಲಗಳಲ್ಲಿ ಹರಿದಾಡುತ್ತಿದ್ದು ಗೊಂದಲಸೃಷ್ಟಿಸಿದೆ.

ತಾಲೂಕಿನ ಎಲ್ಲ ಪ್ರದೇಶಗಳಲ್ಲಿಯೂ ಮಳೆಯಾಗುತ್ತಿದೆ. ಆಗಾಗ ಬಿಡುವನ್ನು ನೀಡುತ್ತಾ ಮಳೆ ಸುರಿಯುತ್ತಿದ್ದು ಎಲ್ಲಿಯೂ ಯಾವುದೇ ಕೃಷಿ ನಾಶ ಸಂಭವಿಸಿಲ್ಲ. ಕಡಿರುಧ್ಯಾವರ ಗ್ರಾಮದ ಕೊಪ್ಪದ ಗಂಡಿ ಎಂಬಲ್ಲಿ ರವಿವಾರ ಸಂಜೆ ಕಿರು ಸೇತುವೆ (ಕಿಂಡಿಅಣೆಕಟ್ಟು) ವಿನಲ್ಲಿ ಮರಮಟ್ಟುಗಳು ಬಂದು ತುಂಬಿಕೊಂಡು ಸೇತುವೆಯ ಮೇಲಿನಿಂದ ನೀರು ಹರಿದು ಸಂಪರ್ಕ ಕಡಿತಗೊಂಡಿತ್ತು. ಈ ಪ್ರದೇಶಗಳಲ್ಲಿ ತೋಟಗಳಿಗೂ ನೀರು ನುಗ್ಗಿದೆ. ಏಳುವರೆ ಹಳ್ಳದಲ್ಲಿ ಭಾರೀ ನೀರು ಬಂದಿದ್ದು ನೀರಿನೊಂದಿಗೆ ಕಳೆದ ಪ್ರಳಯದ ಸಂದರ್ಭ ಸಿಲುಕಿದ್ದ ಮರಗಳು ಹಾಗೂ ಕಸ ಬಂದು ಅಣೆಕಟ್ಟಿನಲ್ಲಿ ತುಂಬಿಕೊಂಡಿದೆ. ಇದು ಸ್ಥಳೀಯರಲ್ಲಿ ಭಯ ಮೂಡಿಸಿತ್ತು. ಕೆಲವು ಗಂಟೆಗಳಲ್ಲಿ  ನೀರು ಇಳಿದಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗೂ ಹಾನಿಯಾಗಿದೆ. ಇದೀಗ ಇಲ್ಲಿ ಸಲುಕಿಕೊಂಡಿದ್ದ ಮರ, ಕಸಗಡ್ಡಿಗಳನ್ನು ತೆರವು ಮಾಡಲಾಗಿದ್ದು ನೀರಿನ ಹರಿವು ಸುಗಮಗೊಂಡಿದೆ.

ದಿಡುಪೆ, ಕಾಜೂರು, ಕೊಲ್ಲಿ, ಮಕ್ಕಿ, ಪರ್ಲ, ಕುಕ್ಕಾವು, ಬೊಳ್ಳೂರು ಬಯಲು,  ಚಾರ್ಮಾಡಿ ಪರಿಸರದ ಕೊಳಂಬೆ, ಅಂತರ, ಪರ್ಲಾನಿ, ಹೊಸಮಠ, ಅನ್ನಾರು, ನಲ್ಲಿಲು ಪರಿಸರವೂ ಸೇರಿದಂತೆ ವಿವಿದೆಡೆ ಕಳೆದ ಬಾರಿ ಪ್ರವಾಹ ಸಂಭವಿಸಿತ್ತು. ನದಿ, ತೋಟ, ಗದ್ದೆಗಳು ಮರಳು, ಹೂಳು ಹಾಗೂ ಮರದ ದಿಮ್ಮಿಗಳಿಂದ ತುಂಬಿತ್ತು. ಇದೀಗ ಶೇಖರಣೆಯಾಗಿದ್ದ ಬಹುತೇಕ ಹೂಳು ಹಾಗೂ ಮರಳು ಅಲ್ಲಿಯೇ ಇದ್ದು ತೆರವು ಮಾಡಲಾಗಿಲ್ಲ. ಇದರಿಂದಾಗಿ ನೇತ್ರಾವತಿ, ಮೃತ್ಯುಂಜಯ ಹಾಗೂ ಇದರ ಉಪನದಿಗಳು ಹಾಗೂ ಹಳ್ಳಗಳಲ್ಲಿ ಹೂಳು ಮರಳು ತುಂಬಿದ್ದು ಅವುಗಳ ಆಳ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಒಂದೇ ಮಳೆಗೆ  ನೀರು ಮೇಲೆ ಬರುವಂತಾಗಿದೆ. ಹಾಗೂ ನೇರವಾಗಿ ತೋಟಗಳಿಗೆ ನುಗ್ಗುವ ಅಪಾಯವಿದೆ. ಇದು ನದಿಬದಿಯಲ್ಲಿ ವಾಸಿಸುವ ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ.  ಪ್ರವಾಹಕ್ಕೆ ಕೊಚ್ಚಿ ಬಂದಿದ್ದ ಸಾಕಷ್ಟು ಮರಗಳು ಕಲ್ಲು ಮಣ್ಣುಗಳು ನದಿಗಳಲ್ಲಿ ಅಲ್ಲಲ್ಲಿ ಬಾಕಿಯಾಗಿದ್ದು ಇದೀಗ ಮಳೆ ನೀರಿನೊಂದಿಗೆ ಕೆಳಗೆ ಹರಿದು ಬರುತ್ತಿದ್ದು ಕಿಂಡಿಅಣೆಕಟ್ಟುಗಳಲ್ಲಿ ಸಿಲುಕಿಕೊಂಡು ನೀರಿನ ಸರಾಗವಾಗಿರುವ ಹರಿಯುವಿಕೆಗೆ ತಡೆಯೊಡ್ಡುತ್ತಿದೆ. ಮಳೆಗಾಲದ ಆರಂಭದಲ್ಲಿಯೇ ನದಿದಡಗಳಲ್ಲಿ ವಾಸಿಸುತ್ತಿರುವ ಜನರಿಗೆ ಕಳೆದ ವರ್ಷದ ಪ್ರಳಯದ ನೆನಪುಗಳು ಕಾಡಲಾರಂಭಿಸಿದ್ದು, ಮಳೆಗಾಲವನ್ನು ಆತಂಕದಿಂದಲೇ ಎದುರುನೋಡುತ್ತಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X