Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಲ್ಲಿ ಭಾರತದ ಮೊದಲ ‘ಸರ್ವೆಲೊ...

ಮಂಗಳೂರಲ್ಲಿ ಭಾರತದ ಮೊದಲ ‘ಸರ್ವೆಲೊ ಪಿಎಕ್ಸ್ 2020’ ಸೈಕಲ್

ಸೈಕ್ಲಿಸ್ಟ್‌ಗಳ ನೆಚ್ಚಿನ ಕೆನಡಿಯನ್ ಸೈಕಲ್ ಬೆಲೆ 12 ಲಕ್ಷ ರೂ.!

ವಾರ್ತಾಭಾರತಿವಾರ್ತಾಭಾರತಿ2 Jun 2020 10:21 PM IST
share
ಮಂಗಳೂರಲ್ಲಿ ಭಾರತದ ಮೊದಲ ‘ಸರ್ವೆಲೊ ಪಿಎಕ್ಸ್ 2020’ ಸೈಕಲ್

ಮಂಗಳೂರು, ಜೂ. 2: ವೃತ್ತಿಪರ ಸೈಕ್ಲಿಸ್ಟ್‌ಗಳ ಅಚ್ಚುಮೆಚ್ಚಿನ ಕೆನಡಿಯನ್ ಮೂಲದ ಕಂಪೆನಿಯ ಸೈಕಲ್ ಆದ ಸರ್ವೆಲೊ ಪಿಎಕ್ಸ್ ಸಿರೀಸ್ ಡ್ಯುರ-ಏಸ್ ಡಿಐ2- 2020 ಮಾದರಿಯದ್ದು. ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕಂಕನಾಡಿ ಬೈಪಾಸ್ ರಸ್ತೆಯ ತಾಜ್ ಸೈಕಲ್ ಮಳಿಗೆಯಲ್ಲಿ ಈ ನೂತನ ಸೈಕಲ್‌ನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸರ್ವೆಲೊ ಪಿಎಕ್ಸ್ ಸಿರೀಸ್‌ನಲ್ಲೇ ಇದು ಮೇಲ್ಪಂಕ್ತಿಯ ಅತ್ಯಾಧುನಿಕ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದೆ. ನಿರ್ದಿಷ್ಟವಾಗಿ ಟ್ರಯಥ್ಲಾನ್ ಸ್ಪರ್ಧಿಗಳಿಗೆಂದೇ ಇದನ್ನು ತಯಾರಿಸಲಾಗಿದ್ದು, ಪ್ರಪಂಚದ ಮೂಲೆಮೂಲೆಯಲ್ಲೂ ಇದಕ್ಕೆ ಅನನ್ಯ ಬೇಡಿಕೆಯಿದೆ.

ಇದು ಹಗುರವಾದ ಮತ್ತು ಬಲಿಷ್ಠವಾದ ಸರ್ವೆಲೊ ಪಿಎಕ್ಸ್ ನೂತನ ಸರಣಿಯ ಸೈಕಲ್ ‌ಆಗಿದೆ. ಸುಧಾರಿತ ‘ಏರೋ’ ಪರೀಕ್ಷೆಯಿಂದ ತಯಾರಿಸಲಾದ ಈ ಯಂತ್ರವು ಸುಧಾರಿತ ಏರೋಡೈನಾಮಿಕ್ಸ್, ಅತ್ಯದ್ಭುತ ಕಾಕ್‌ಪಿಟ್ ಒಳಗೊಂಡಿದೆ. ಈ ಸೈಕಲ್ ಅತ್ಯಾಧುನಿಕ ಶಿಮಾನೊ ಡ್ಯುರಾ ಏಸ್ ಡಿಐ 2 ಸಾಫ್ಟ್‌ವೇರ್‌ನ ಡ್ರೈವ್ ಹೊಂದಿದೆ. ಇಲೆಕ್ಟ್ರಾನಿಕ್ ಗಿಯರ್ ಶಿಫ್ಟರ್‌ನ್ನು ಲ್ಯಾಪ್‌ಟಾಪ್ ಬಳಸಿಕೊಂಡೇ ಫಿಟ್‌ಅಪ್ ಮಾಡಬಹುದು.

ಸಾಮಾನ್ಯವಾಗಿ ಸೈಕಲ್‌ಗಳನ್ನು ಸ್ಟೀಲ್ ಲೋಹದಿಂದಲೇ ಉತ್ಪಾದಿಸಲಾಗುತ್ತದೆ. ಆದರೆ ಈ ಸೈಕಲ್‌ನ್ನು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಈ ಸೈಕಲ್‌ನ್ನು ನಿರ್ದಿಷ್ಟ ರೈಡರ್‌ಗೆ ತಕ್ಕಂತೆ ಸೆಟ್‌ಅಪ್ ಮಾಡಬಹುದು. ಆತನ ಎತ್ತರ, ತೂಕಕ್ಕೆ ಅನುಗುಣವಾಗಿ ಸೆಟ್‌ಅಪ್ ಮಾಡಲಾಗುತ್ತದೆ. ಜತೆಗೆ ಅಗತ್ಯಾನುಸಾರ ಹ್ಯಾಂಡಲ್ ಹಿಂದೆ ಮುಂದೆ ಸರಿಸುವ ಅವಕಾಶವೂ ಇದೆ.

ಆಧುನಿಕ ದಿನಮಾನಗಳಲ್ಲಿ ಹೆಚ್ಚಿನ ಜನತೆ ಫಿಟ್‌ನೆಸ್‌ಗಾಗಿ ಅತ್ಯಾಧುನಿಕ ಸೈಕಲ್‌ಗಳನ್ನು ಖರೀದಿಸುವ ಟ್ರೆಂಡ್ ಬೆಳೆಯುತ್ತಿದೆ. ಯುವ ಜನಾಂಗದ ಸೈಕ್ಲಿಸ್ಟ್‌ಗಳೇ ನೂತನ ಶೈಲಿಯ ಸೈಕಲ್‌ಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಈ ಸೈಕಲ್‌ನ ಮಾರುಕಟ್ಟೆಯ ಬೆಲೆ ಕೇವಲ 12 ಲಕ್ಷ ರೂ. ಮಾತ್ರ ಎನ್ನುತ್ತಾರೆ ತಾಜ್ ಸೈಕಲ್ ಮಳಿಗೆಯ ಮಾಲಕ ಮುಬೀನ್.

ತಾಜ್ ಸೈಕಲ್ ಮಳಿಗೆಯು 1927ರಿಂದಲೇ ಕಾರ್ಯಾಚರಿಸುತ್ತಿದೆ. ನಾಲ್ಕು ಬ್ರಾಂಚ್‌ಗಳನ್ನು ಹೊಂದಿದ್ದು, ಹೊಯ್ಗೆಬಝಾರ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಐದಾರು ಜಿಲ್ಲೆಗಳಲ್ಲಿ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ಸೈಕಲ್ ಸರಬರಾಜು ಮಾಡಲಾಗುತ್ತಿದೆ ಎಂದು ಮುಬೀನ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X