ಮುಂಬೈಗೆ ಅಪ್ಪಳಿಸಿದ ‘ನಿಸರ್ಗ’ ಚಂಡಮಾರುತಕ್ಕೆ ಮೊದಲ ಬಲಿ
ಹೊಸದಿಲ್ಲಿ: ಮಹಾರಾಷ್ಟ್ರ ರಾಜ್ಯಕ್ಕೆ ‘ನಿಸರ್ಗ’ ಚಂಡಮಾರುತ ಇಂದು ಅಪ್ಪಳಿಸಿದ್ದು, ಗಾಳಿಯ ತೀವ್ರತೆಗೆ ವಿದ್ಯುತ್ ಕಂಬವೊಂದು ಬಿದ್ದ ಪರಿಣಾಮ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
“ಅಲಿಬಾಗ್ ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಲ್ಲಿನ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಿದ್ದ ಪರಿಣಾಮ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ” ಎಂದು ರಾಯ್ ಘಡ್ ಜಿಲ್ಲಾಧಿಕಾರಿ ನಿಧಿ ಚೌಧರಿ ಮಾಹಿತಿ ನೀಡಿದ್ದಾರೆ.
Next Story