ರವಿವಾರ 'ಕರ್ನಾಟಕ ಜನಸಂವಾದ ರ್ಯಾಲಿ'ಯನ್ನುದ್ದೇಶಿಸಿ ಜೆ.ಪಿ.ನಡ್ಡಾ ಭಾಷಣ
![ರವಿವಾರ ಕರ್ನಾಟಕ ಜನಸಂವಾದ ರ್ಯಾಲಿಯನ್ನುದ್ದೇಶಿಸಿ ಜೆ.ಪಿ.ನಡ್ಡಾ ಭಾಷಣ ರವಿವಾರ ಕರ್ನಾಟಕ ಜನಸಂವಾದ ರ್ಯಾಲಿಯನ್ನುದ್ದೇಶಿಸಿ ಜೆ.ಪಿ.ನಡ್ಡಾ ಭಾಷಣ](https://www.varthabharati.in/sites/default/files/images/articles/2020/06/13/247260-1592070327.jpg)
ಬೆಂಗಳೂರು, ಜೂ. 13: ಮಾರಕ ಕೊರೋನ ವೈರಸ್ ಸೋಂಕಿನ ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಸೇರಿದಂತೆ ಕೇಂದ್ರ ಸರಕಾರದ ಎರಡನೆ ಅವಧಿ ಸಾಧನೆಗಳ ಕುರಿತು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ರವಿವಾರ ಸಂಜೆ 'ಕರ್ನಾಟಕ ಜನಸಂವಾದ ರ್ಯಾಲಿ'ಯನ್ನು ಉದ್ದೇಶಿಸಿ ಹೊಸದಿಲ್ಲಿಯಿಂದ ಮಾತನಾಡಲಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆಯಲಿರುವ ವಿಡಿಯೋ ಸಂವಾದದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ. ನಡ್ಡಾ ಅವರು, ಕೇಂದ್ರ ಸರಕಾರ ದೇಶದ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳು, ಯೋಜನೆಗಳ ಕುರಿತು ವಿವರಿಸಲಿದ್ದಾರೆ ಎಂದು ತಿಳಿಸಲಾಗಿದೆ.
ದೇಶ್ಯಾದ್ಯಂತ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನ 2ಗಂಟೆಯಿಂದ ಪಕ್ಷದ ಕಚೇರಿಗೆ ಯಾವುದೇ ಜನಪ್ರತಿನಿಧಿಗಳಿಗೆ, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ಪಕ್ಷದ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.