Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜೂ.21ರಂದು ಮತ್ತೆ ನಡೆಯಲಿದೆ ಸೂರ್ಯಗ್ರಹಣ

ಜೂ.21ರಂದು ಮತ್ತೆ ನಡೆಯಲಿದೆ ಸೂರ್ಯಗ್ರಹಣ

ವಾರ್ತಾಭಾರತಿವಾರ್ತಾಭಾರತಿ17 Jun 2020 6:25 PM IST
share

ಉಡುಪಿ, ಜೂ.17: ಇದೇ ಜೂ.21ರ ರವಿವಾರ ಮತ್ತೊಂದು ಸೂರ್ಯಗ್ರಹಣಕ್ಕೆ ಜನತೆ ಸಾಕ್ಷಿಯಾಗಲಿದೆ. ಕಳೆದ ಡಿ.26ರ ಕಂಕಣ ಸೂರ್ಯ ಗ್ರಹಣದ ಬಳಿಕ ಸಂಭವಿಸುತ್ತಿರುವ 2020ರ ಮೊದಲ ಸೂರ್ಯ ಗ್ರಹಣ ಇದಾಗಿದೆ.

ಅಮಾವಾಸ್ಯೆಯ ದಿನದಂದು ಚಂದ್ರ, ಸೂರ್ಯ ಮತ್ತು ಭೂಮಿಯ ನಡುವೆ ನಿಖರವಾದ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ. ಏಕೆಂದರೆ ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವೆ ಎಲ್ಲಾ ಅಮಾವಾಸ್ಯೆಯ ದಿನಗಳಲ್ಲಿ ನಿಖರವಾಗಿ ಇರುವುದಿಲ್ಲ. ಯಾಕೆಂದರೆ ಚಂದ್ರನ ಮಾರ್ಗವು ಸೂರ್ಯನ ಮಾರ್ಗದಿಂದ 5 ಡಿಗ್ರಿಗಳಷ್ಟು ಓರೆಯಾಗಿದೆ.

ಸೂರ್ಯ ಮತ್ತು ಚಂದ್ರನ ಗಾತ್ರ ವ್ಯತ್ಯಾಸ, ಭೂಮಿ-ಸೂರ್ಯ ಹಾಗೂ ಭೂಮಿ-ಚಂದ್ರನ ನಡುವಿನ ಅಂತರದಿಂದಾಗಿ, ಭೂಮಿಯಿಂದ ಗಮನಿಸಿದಾಗ ಸೂರ್ಯ ಮತ್ತು ಚಂದ್ರನ ಗಾತ್ರ ಒಂದೇ ಆಗಿ ಭಾಸವಾಗುತ್ತದೆ. ಇದರಿಂದಾಗಿಯೇ ಗ್ರಹಣದ ಸೌಂದರ್ಯವು ನಮಗೆ ಗೋಚರಿಸುವುದು.

ಎಲ್ಲಾ ಗ್ರಹಗಳಂತೆ, ಚಂದ್ರನು ಭೂಮಿಯ ಸುತ್ತ ಅಂಡಾಕಾರದ ಮಾರ್ಗ ದಲ್ಲಿ ಚಲಿಸುತ್ತಾನೆ. ಇದರಿಂದಾಗಿ ಚಂದ್ರನು ತನ್ನ ಮಾರ್ಗದಲ್ಲಿ ಒಮ್ಮೆ ಭೂಮಿಗೆ ಹತ್ತಿರವಾದರೆ, ಇನ್ನೊಮ್ಮೆ ದೂರವಿರುತ್ತಾನೆ. ಆದ್ದರಿಂದ, ಚಂದ್ರನು ಭೂಮಿಗೆ ಹತ್ತಿರದಲ್ಲಿದ್ದರೆ, ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತಾನೆ.ಅದು ಖಗ್ರಾಸ ಸೂರ್ಯಗ್ರಹಣವಾಗುತ್ತದೆ. ಆದರೆ ಚಂದ್ರ, ಭೂಮಿಯಿಂದ ಸಾಕಷ್ಟು ದೂರದಲ್ಲಿದ್ದಾಗ, ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚಲು ಸಾಧ್ಯವಾಗುವುದಿಲ್ಲ. ಆಗ ಸೂರ್ಯನು ಬಳೆಯ ಆಕಾರದಲ್ಲಿ ಕಾಣುತ್ತಾನೆ. ಆಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ.

ಜೂ.21ರ ಗ್ರಹಣವು ಆಫ್ರಿಕಾ ಖಂಡದ ಕಾಂಗೋ, ದಕ್ಷಿಣ ಸುಡಾನ್ನಲ್ಲಿ ಕಂಕಣ ಸೂರ್ಯಗ್ರಹಣವಾಗಿ ಕಾಣಿಸಿಕೊಳ್ಳುತ್ತದೆ. ಏಷ್ಯಾದ ಒಮಾನ್, ಯೆಮೆನ್, ಪಾಕಿಸ್ತಾನ, ಭಾರತ, ಚೀನಾ ದೇಶಗಳ ಮೂಲಕ ಗುವಾಮ್ ದ್ವೀಪಗಳಲ್ಲಿ ಗರಿಷ್ಠ ಸ್ಥಿತಿ ತಲುಪುತ್ತದೆ. ಭಾರತದಿಂದ ಚೀನಾಕ್ಕೆ ತೆರಳುವ ಮೊದಲು ರಾಜಸ್ಥಾನ, ಹರಿಯಾಣ ಮತ್ತು ಉತ್ತರಾಖಂಡದ ಮೂಲಕ ಹಾದುಹೋಗುತ್ತದೆ. ಸಿರ್ಸಾ, ಕುರುಕ್ಷೇತ್ರ, ಡೆಹ್ರಾಡೂನ್, ಟೆಹ್ರಿ ಮತ್ತು ಹಿಮಾಲಯ ಪರ್ವತದ ಕೆಲವು ಸ್ಥಳಗಳಲ್ಲಿ ಶೇ.98.2ರಷ್ಟು ಸೂರ್ಯನನ್ನು ಆವರಿಸಿಕೊಂಡು ಬಹಳ ತೆಳುವಾದ ಬಳೆಯಾಕಾರವು ಕಾಣಸಿಗುತ್ತದೆ.

ಉಡುಪಿಯಲ್ಲಿ ಸೂರ್ಯನ ಶೇ.40.38ರಷ್ಟು ಭಾಗವನ್ನು ಚಂದ್ರನು ಆವರಿಸಿರುವುದರಿಂದ ಖಂಡಗ್ರಾಸ ಗ್ರಹಣವು ಕಾಣಿಸುತ್ತದೆ. ಬೆಳಗ್ಗೆ 10:04ಕ್ಕೆ ಪ್ರಾರಂಭವಾಗಿ ಅಪರಾಹ್ನ 1:22ಕ್ಕೆ ಕೊನೆಗೊಳ್ಳಲಿದೆ. ಬೆಳಗ್ಗೆ 11:37 ಗರಿಷ್ಠ ಗ್ರಹಣದ ಸಮಯವಾಗಿರುತ್ತದೆ.

ಮಂಗಳೂರಿನಲ್ಲೂ ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಚಂದ್ರ ಶೇ.38.71ರಷ್ಟು ಭಾಗ ಸೂರ್ಯನನ್ನು ಆವರಿಸುತ್ತಾನೆ. ಇಲ್ಲಿ ಗ್ರಹಣ ಬೆಳಿಗ್ಗೆ 10:04ಕ್ಕೆ ಪ್ರಾರಂಭವಾಗಿ 11:37ಕ್ಕೆ ಗರಿಷ್ಠ ಮತ್ತು ಅಪರಾಹ್ನ 1:21ಕ್ಕೆ ಕೊನೆಗೊಳ್ಳುತ್ತದೆ.  ಸೂರ್ಯಗ್ರಹಣ ಒಟ್ಟು 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ. ಗ್ರಹಣವನ್ನು ವೀಕ್ಷಿಸುವ ವಿಷಯಕ್ಕೆ ಬಂದಾಗ, ಜನರು ಬರಿಗಣ್ಣಿನಿಂದ ನೇರವಾಗಿ ಗ್ರಹಣವನ್ನು ವೀಕ್ಷಿಸದಂತೆ ಎಚ್ಚರಿಸಲಾಗುತ್ತದೆ. ಸೌರ ಫಿಲ್ಟರ್‌ಗಳನ್ನು ಹೊಂದಿ ರುವ ಕನ್ನಡಕಗಳ ಮೂಲಕ ಮಾತ್ರ ಗ್ರಹಣವನ್ನು ನೇರವಾಗಿ ವೀಕ್ಷಿಸಬಹುದು.

ಸೂರ್ಯನನ್ನು ನೋಡಿದ ನಂತರ, ಕೂಡಲೇ ಕನ್ನಡಕಗಳನ್ನು ತೆಗೆಯದೆ ಬದಲಿಗೆ ನೆಲದ ಕಡೆಗೆ ತಿರುಗಿ ಕನ್ನಡಕ/ಫಿಲ್ಟರ್ಗಳನ್ನು ತೆಗೆಯಬೇಕು.
ಕೆಮರಾ, ಬೈನಾಕ್ಯುಲರ್ ಅಥವಾ ದೂರದರ್ಶಕಗಳನ್ನು ಬಳಸಿ ಫಿಲ್ಟರ್ ಇಲ್ಲದೆ ಗ್ರಹಣವನ್ನು ಎಂದಿಗೂ ನೋಡಬಾರದು ಏಕೆಂದರೆ ಅದು ಕ ಣ್ಣಿಗೆ ಹಾನಿಯನ್ನುಂಟು ಮಾಡುತ್ತದೆ.

 ಕೆಮರಾ, ಬೈನಾಕ್ಯುಲರ್ ಅಥವಾ ದೂರದರ್ಶಕಗಳನ್ನು ಬಳಸಿ ಫಿಲ್ಟರ್ ಇಲ್ಲದೆ ಗ್ರಹಣವನ್ನು ಎಂದಿಗೂ ನೋಡಬಾರದು ಏಕೆಂದರೆ ಅದು ಕಣ್ಣಿಗೆ ಹಾನಿಯನ್ನುಂಟು ಮಾಡುತ್ತದೆ. ಗ್ರಹಣವನ್ನು ವೀಕ್ಷಿಸಲು ಸುರಕ್ಷಿತ ವಿಧಾನಗಳನ್ನು ಅನುಸರಿಸುವಂತೆ ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಮನವಿ ಮಾಡಿದೆ. ಈ ಭಾಗದಲ್ಲಿ ಮುಂದಿನ ಇಂಥ ಖಗೋಳ ವಿದ್ಯಮಾನ 2022ರ ಅಕ್ಟೋಬರ್ 25ರಂದು ಸಂಭವಿಸಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X