ಮಾಸ್ಕ್ ಧರಿಸದವರಿಂದ 27ಸಾವಿರ ರೂ. ದಂಡ ವಸೂಲಿ: ಉಡುಪಿ ಡಿಸಿ ಜಿ.ಜಗದೀಶ್
ಮಾಸ್ಕ್ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ಮೆರವಣಿಗೆ
ಉಡುಪಿ, ಜೂ.18: ಉಡುಪಿಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಾಕದವರಿಗೆ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕರೋನ ವಿರುದ್ಧ ನಿರಂತರ ಹೋರಾಟ ಅಗತ್ಯವಾಗಿದೆ. ಈ ಹೋರಾಟ ಮುಗಿಯುವುದಿಲ್ಲ. ಈ ಹೋರಾಟದಲ್ಲಿ ಬಹಳ ಮುಖ್ಯವಾದ ಅಸ್ತ್ರ ಮಾಸ್ಕ್. ಮಾಸ್ಕ್ ಬಳಕೆಯಿಂದ ಶೇ.50ರಷ್ಟು ಸೋಂಕನ್ನು ಹರಡದಂತೆ ತಡೆಗಟ್ಟಬಹುದು. ಈ ಪ್ರಯೋಗ ಇತರ ರಾಷ್ಟ್ರಗಳಲ್ಲಿಯೂ ಯಶಸ್ವಿ ಯಾಗಿದೆ. ಆದುದರಿಂದ ಪ್ರತಿ ಯೊಬ್ಬರು ಹೊರಗಡೆ ಮಾಸ್ಕ್ ಇಲ್ಲದೆ ಬರಬಾರದು. ಇದರಿಂದ ನಿಮಗೂ ಮತ್ತು ಇತರರಿಗೂ ಅನುಕೂಲವಾಗುತ್ತದೆ ಎಂದರು.
ಉಡುಪಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈತೊಳೆಯಲು ಮಾಡಿರುವ ವ್ಯವಸ್ಥೆಯನ್ನು ಎಲ್ಲ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಮಾಡಬೇಕು. ಸ್ಯಾನಿಟೈಸರ್ಗಿಂತ ಕೈತೊಳೆಯುವ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡಾ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮೊದಲಾ ದವರು ಉಪಸ್ಥಿತರಿದ್ದರು.
ಬಳಿಕ ಜಿಲ್ಲಾಧಿಕಾರಿ, ಶಾಸಕರು ಭಾಗವಹಿಸಿದ ಪಾದಯಾತ್ರೆ ನಗರಸಭೆ ಯಿಂದ ಹೊರಟು ತ್ರಿವೇಣಿ ಸರ್ಕಲ್ ಮೂಲಕ ತಿರುಗಿ, ಕೆಎಂ ಮಾರ್ಗ, ಹಳೆ ಡಯಾನ ಸರ್ಕಲ್, ಕೋರ್ಟ್ ರಸ್ತೆ ಮಾರ್ಗವಾಗಿ ಜೋಡುಕಟ್ಟೆಯಲ್ಲಿ ಸಮಾಪ್ತಿಗೊಂಡಿತು.
ಕೊರೋನ ಗುಣಮುಖದಲ್ಲೂ ಉಡುಪಿ ಪ್ರಥಮ !
ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟುವ ಮೂಲಕ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ. ಅದೇ ರೀತಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗುವುದರಲ್ಲಿಯೂ ನಾವೇ ಮೊದಲೇ ಸ್ಥಾನದಲ್ಲಿದ್ದೇವೆ. ಸದ್ಯ 130 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲ ನಾಲ್ಕೈದು ದಿನಗಳಲ್ಲಿ ಗುಣ ಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಕೊರೋನದ ಬಗ್ಗೆ ಕೂಡ ಆತಂಕ ಪಡುವ ಅಗತ್ಯ ಇಲ್ಲ. ಹೊರರಾಜ್ಯದಿಂದ ಬರುವವರಿಂದ ಸಾಕಷ್ಟು ಅಂತರವನ್ನು ಕಾಪಾಡಿಕೊಳ್ಳಬೇಕು. ರಾಜ್ಯದಲ್ಲಿ ಕ್ವಾರಂಟೇನ್ ಮಾರ್ಗಸೂಚಿ ಬದಲಾದರೂ ಉಡುಪಿಯಲ್ಲಿ ಮಾತ್ರ ಮಹಾ ರಾಷ್ಟ್ರದಿಂದ ಬರುವವರನ್ನು ಹೋಮ್ ಕ್ವಾರಂಟೇನ್ನಲ್ಲಿ ಇರಿಸಿ, ಮನೆಯನ್ನು ಸೀಲ್ಡೌನ್ ಮಾಡಲಾಗುತ್ತದೆ. ಈ ಮನೆಗಳಿಂದ ಯಾರಾದರೂ ಹೊರಗಡೆ ಬಂದರೆ ಅವರ ಬಗ್ಗೆ ಸ್ಥಳೀಯರು ತಕ್ಷಣ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ಸುರಕ್ಷಿತ ಅಂತರಕ್ಕೆ ಛತ್ರಿ ಪ್ರಯೋಗ!
ಮಾಸ್ಕ್ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾದ ಮೆರವಣಿಗೆಯಲ್ಲಿ ಸುರಕ್ಷಿತ ಅಂತರ ಕಾಪಾಡುಲು ಉಡುಪಿ ನಗರಸಭೆಯು ‘ಛತ್ರಿ’ ವಿಶಿಷ್ಟ ಪ್ರಯೋಗ ವನ್ನು ಕಂಡುಕೊಂಡಿದೆ.
ಮೆರವಣಿಗೆಯಲ್ಲಿ ಭಾಗವಹಿಸಿದ ಡಿಸಿ, ಶಾಸಕರು ಸಹಿತ ಎಲ್ಲ 50 ಮಂದಿಗೆ ಛತ್ರಿಯನ್ನು ನೀಡಲಾಗಿತ್ತು. ಎಲ್ಲರು ಛತ್ರಿಯನ್ನು ಹಿಡಿದುೊಂಡು ಮೆರವಣಿಗೆಯಲ್ಲಿ ಸಾಗಿದರು. ಇದರಿಂದ ಸ್ವಯಂ ಆಗಿಯೇ ಸುರಕ್ಷಿತ ಅಂತರ ವನ್ನು ಮೆರವಣಿಗೆಯಲ್ಲಿ ಕಾಪಾಡಲಾಯಿತು. ಸುರಕ್ಷಿತ ಅಂತರವನ್ನು ಕಾಪಾ ಡಲು ಈ ಸುಲಭ ವಿಧಾನದ ಬಗ್ಗೆ ಜಿಲ್ಲಾಧಿಕಾರಿ ಶ್ಲಾಘಿಸಿದರು.