ಕೋವಿಡ್-19 ಬಾಧಿತ ಮೃತ ಶರೀರದ ಅಂತ್ಯ ಸಂಸ್ಕಾರದ ತರಬೇತಿ ಕಾರ್ಯಾಗಾರ
ಮಂಗಳೂರು, ಜೂ.20: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕೋವಿಡ್-19 ಮೃತ ಶರೀರದ ಅಂತ್ಯ ಸಂಸ್ಕಾರ ನಡೆಸುವ ತರಬೇತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿತೆಯು ಶುಕ್ರವಾರ ನಗರದ ಕೆಸ್ಟಲ್ ಸಭಾಂಗಣದಲ್ಲಿ ನಡೆಯಿತು.
ತರಬೇತುದಾರರಾಗಿ ವೆನ್ಲಾಕ್ ಸರಕಾರಿ ಜಿಲ್ಲಾ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ನವೀನ್ ಕುಮಾರ್ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಿಸಿದ ರೀತಿಯಲ್ಲಿಯೇ ಕೋವಿಡ್ ಬಾಧಿಸಿ ಮೃತ ಹೊಂದಿದವರ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. ಈ ಸಂದಿಗ್ಧ ಘಟ್ಟದ ಸವಾಲುಗಳನ್ನು ಮಾನವೀಯ ಸೇವಾ ಜವಾಬ್ದಾರಿಯಿಂದ ಮಾಡಲು ಆಯೋಜಿಸಿದ ಈ ಕಾರ್ಯಾಗಾರವು ಶ್ಲಾಘನೀಯ. ಕೋವಿಡ್ ಯಾರಿಗೂ ಬಾರದಿರಲಿ, ಯಾರೂ ಈ ಸೋಂಕಿಗೆ ಒಳಗಾಗದಿರಲಿ ಎಂದು ಹೇಳಿದರು.
ಕೋವಿಡ್ ಬಾಧಿತ ಮೃತರ ಅಂತ್ಯ ಸಂಸ್ಕಾರದ ಪ್ರಾತ್ಯಕ್ಷಿಕೆಯನ್ನು ಪಿಎಫ್ಐ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶ್ರಫ್ ಅಂಕಜಾಲ್ ನಡೆಸಿಕೊಟ್ಟರು. ಪಿಎಫ್ಐ ಮೆಡಿಕಲ್ ಉಸ್ತ್ತುವಾರಿ ಇಲ್ಯಾಸ್ ಬಜಪೆ ಉಪಸ್ಥಿತರಿದ್ದರು.
Next Story