ದಮಾಮ್ನಿಂದ ಮಂಗಳೂರಿಗೆ ಹೊರಟ ಅನಿವಾಸಿ ಕನ್ನಡಿಗರನ್ನು ಹೊತ್ತ ಬಾಡಿಗೆ ವಿಮಾನ
‘ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಮ್’ನಿಂದ ವ್ಯವಸ್ಥೆ
ದಮಾಮ್, ಜೂ. 22: ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದ ಅನಿವಾಸಿ ಕನ್ನಡಿಗರನ್ನು ತವರೂರಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಮುಂದುವರಿದಿದೆ. ಸೋಮವಾರ ದಮಾಮ್ನಿಂದ (ಸೌದಿ ಅರೇಬಿಯಾದ ಕಾಲಮಾನ 2 ಗಂಟೆ) ಮಂಗಳೂರಿಗೆ ಬಾಡಿಗೆಯ ಇಂಡಿಗೋ ವಿಮಾನವು ಯಾನ ಆರಂಭಿಸಿದೆ. ಈ ವಿಮಾನವು ರಾತ್ರಿ 8:30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ತಿಳಿದು ಬಂದಿದೆ.
ಸೌದಿ ಅರೇಬಿಯಾದಲ್ಲಿ ಅಸ್ತಿತ್ವಕ್ಕೆ ಬಂದ ‘ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಮ್’ ಈ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣದ ವೆಚ್ಚವನ್ನು ಪ್ರಯಾಣಿಕರೇ ಭರಿಸಿದ್ದಾರೆ. ಈ ವಿಮಾನದಲ್ಲಿ 8 ಪುಟಾಣಿಗಳಲ್ಲದೆ ಇತರ 165 ಪ್ರಯಾಣಿಕರಿದ್ದಾರೆ ಎಂದು ‘ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಮ್’ನ ಮೂಲಗಳು ತಿಳಿಸಿವೆ.
Next Story