ಉಡುಪಿ: ಮಳೆಗಾಲದ ಅಪರಾಧ ಕೃತ್ಯ ತಡೆಯಲು ಪೊಲೀಸ್ ಇಲಾಖೆಯ ಸಲಹೆಗಳನ್ನು ಪಾಲಿಸಲು ಸೂಚನೆ
ಉಡುಪಿ, ಜೂ.22: ಹಿಂದಿನ ವರ್ಷದ ಮಳೆಗಾಲದ ಸಂದರ್ಭದಲ್ಲಿ ವಿವಿಧ ಬಡಾವಣೆಗಳಲ್ಲಿ ಮನೆಗಳ್ಳತನ, ದರೋಡೆ, ಸುಲಿಗೆ, ಸರಗಳ್ಳತನ ಪ್ರಕರಣಗಳು ನಡೆದಿರುವುದರಿಂದ ಸಾರ್ವಜನಿಕರು ತಮ್ಮ ಸೊತ್ತುಗಳ ರಕ್ಷಣೆ ಮಾಡಿಕೊಳ್ಳು ವಂತೆ ಪೊಲೀಸ್ ಇಲಾಖೆ ಕೆಲವೊಂದು ಸಲಹೆ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಕಾರಣ ಇಲ್ಲದೆ ಮನೆ ಅಥವಾ ಗ್ರಾಮಗಳಿಗೆ ಬರುವ ಅಪರಿಚಿತರ ಹೆಸರು, ವಿಳಾಸ, ಮೊಬೈಲ್, ಬಂದಿರುವ ವಾಹನಗಳ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳ ಬೇಕು. ಮನೆಯ ಗೋಡೆ, ಛಾವಣಿ, ಕಿಟಕಿ ಮತ್ತು ಬಾಗಿಲುಗಳನ್ನು ಸುಸ್ಥಿತಿ ಯಲ್ಲಿರಿಸಿಕೊಳ್ಳಬೇಕು. ಮುಂಬಾಗಿಲಿಗೆ ಮತ್ತು ಗೇಟ್ಗೆ ಕಾಣುವಂತೆ ಬೀಗ ಗಳನ್ನು ಹಾಕುವುದರಿಂದ ಮನೆಯಲ್ಲಿ ಯಾರು ಇಲ್ಲ ಎಂದು ಕಳ್ಳರಿಗೆ ಸುಲಭ ವಾಗಿ ತಿಳಿಯುತ್ತದೆ.
ಮನೆಯನ್ನು ಬಿಟ್ಟು ತುಂಬಾ ದಿನಗಳವರೆಗೆ ಹೊರಗೆ ಹೋದಾಗ ದಿನ ಪತ್ರಿಕೆ ಹಾಗೂ ಹಾಲಿನ ಪ್ಯಾಕೆಟ್ ಹಾಕದಂತೆ ಸೂಚನೆ ನೀಡಬೇಕು. ಮನೆಯ ಮುಂಭಾಗದಲ್ಲಿ ತುಂಬಾ ದಿನಗಳ ದಿನಪತ್ರಿಕೆ ಬಿದ್ದಿದ್ದರೆ ಮನೆಯಲ್ಲಿ ಯಾರು ಇಲ್ಲ ಎಂದು ಕಳ್ಳರಿಗೆ ಸುಲಭವಾಗಿ ತಿಳಿಯುತ್ತದೆ. ರಾತ್ರಿ ವೇಳೆಯಲ್ಲಿ ಮನೆಯ ಸುತ್ತಮುತ್ತ ಆವರಣಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳ ಬೇಕು.
ಅವಶ್ಯಕತೆ ಇಲ್ಲದ ಬಂಗಾರದ ಆಭರಣಗಳನ್ನು ಹಾಗೂ ಬೆಲೆ ಬಾಳುವ ಸೊತ್ತುಗಳನ್ನು ಬ್ಯಾಂಕ್ನ ಸೇಪ್ಟಿಲಾಕರ್ನಲ್ಲಿ ಇಡಲು ವ್ಯವಸ್ಥೆ ಮಾಡಿ ಕೊಳ್ಳಬೇಕು. ಅಪಾರ್ಟ್ಮೆಂಟ್ಗೆ ರಾತ್ರಿ ವೇಳೆ ಸೆಕ್ಯುರಿಟಿ ಗಾರ್ಡ್ಗಳನ್ನು ನೇಮಕ ಮಾಡಿ ಕೊಳ್ಳಬೇಕು. ಒಂಟಿ ಮನೆಗಳು ಅಥವಾ ಸ್ವತಂತ್ರ ಮನೆಗಳಾಗಿದ್ದರೆ ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಬೇಕು. ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿ ಅಥವಾ ವಾಹನಗಳ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ವಸ್ತು ಮಾರಾಟ ಮಾಡುವ ವ್ಯಕ್ತಿಗಳ ಭಾವಚಿತ್ರ ಗಳನ್ನು ಮೊಬೈಲ್ನಲ್ಲಿ ತೆಗೆದು ಠಾಣೆಗೆ ಮಾಹಿತಿ ರವಾನಿಸಬೇಕು.
ವಾಕಿಂಗ್ ಹೋಗುವಾಗ ಸಾಧ್ಯವಾದಷ್ಟು ಗುಂಪು ಗುಂಪಾಗಿ ಹೋಗಬೇಕು. ಚಿನ್ನಾಭರಣಗಳನ್ನು ಪಾಲಿಶ್ ಮಾಡಿಕೊಡುವವರ, ಕಡಿಮೆ ದರದಲ್ಲಿ ಬಟ್ಟೆ ಮಾರಾಟ ಮಾಡುವವರ ಮತ್ತು ಚಿಂದಿ ಆಯುವವರು ಅಥವಾ ಅನಾಮ ಧೇಯವಾಗಿ ತಿರುಗಾಡುವವರ ಬಗ್ಗೆ ಎಚ್ಚರವಾಗಿ ರಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.