ಮಲ್ಪೆ: ಸಮುದ್ರ ಪೂಜೆಯೊಂದಿಗೆ ನಾಡದೋಣಿ ಮೀನುಗಾರಿಕೆಗೆ ಚಾಲನೆ
ಮಲ್ಪೆ, ಜೂ.22: ಮಳೆಗಾಲದ ಎರಡು ತಿಂಗಳ ಯಾಂತ್ರಿಕ ಮೀನು ಗಾರಿಕೆಗೆ ನಿಷೇಧದ ಸಂದರ್ಭದಲ್ಲಿ ನಡೆಯುವ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಕೆಗೆ ಸೋಮವಾರ ಮಲ್ಪೆಯಲ್ಲಿ ಸಮುದ್ರ ಪೂಜೆ ನಡೆುವ ಮೂಲಕ ಚಾಲನೆ ನೀಡಲಾಯಿತು.
ಮಲ್ಪೆ ನಾಡದೋಣಿ ಮೀನುಗಾರ ಸಂಘದ ವತಿಯಿಂದ ಸುಮಾರು 38 ಜೋಡಿ ನಾಡದೋಣಿ ಮೀನುಗಾರರು, ಬೆಣ್ಣೆಕುದ್ರು ಶ್ರೀ ಕುಲಮಹಾಸೀ ಅಮ್ಮನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಬಳಿಕ ಮಲ್ಪೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಇದೇ ವೇಳೆ ವಡಭಾಂಡೇಶ್ವರ ಸಮುದ್ರತೀರದಲ್ಲಿ ಸಮುದ್ರಕ್ಕೆ ಲಪುಷ್ಪ ಕ್ಷೆರವನ್ನು ಸಮರ್ಪಿಸಲಾಯಿತು. ಮಳೆಗಾಲದ ಈ ಸಂದರ್ಭದಲ್ಲಿ ಉತ್ತಮ ಮತ್ತು ಸುರಕ್ಷಿತ ಮೀನುಗಾರಿಕೆ ನಡೆಯಲಿ ಎಂದು ಮೀನುಗಾರರು ಸಾುೂಹಿಕ ವಾಗಿ ಪ್ರಾರ್ಥನೆ ಸಲ್ಲಿಸಿದರು. ಮಲ್ಪೆ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಉಪಾಧ್ಯಕ್ಷ ಸುಂದರ ಪಿ.ಸಾಲ್ಯಾನ್, ಕಾರ್ಯದರ್ಶಿ ಸದಾಶಿವ ಕಾಂಚನ್, ಕೋಶಾಧಿಕಾರಿ ಹರೀಶ್ ತಿಂಗಳಾಯ, ಹಿರಿಯರಾದ ರಾಮ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
32 ಮಾಟುಬಲೆ ಗುಂಪು
ಮಳೆಗಾಲದಲ್ಲಿ 2 ತಿಂಗಳು ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವುದ ರಿಂದ ಆ ಎರಡು ತಿಂಗಳ ಕಾಲ 10ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್ ಬಳಸಿ ಮೀನುಗಾರಿಕೆ ನಡೆಸಲು ನಾಡದೋಣಿ ಮೀನುಗಾರರಿಗೆ ಅವಕಾಶ ಇರುತ್ತದೆ. ಅದರಂತೆ ಸಹಕಾರಿ ತತ್ವದಡಿ ಉಡುಪಿ ಜಿಲ್ಲೆಯ ಮೀನುಗಾರರು ಸಾಂಪ್ರ ದಾಯಿಕ ನಾಡದೋಣಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ 16,000ಕ್ಕೂ ಅಧಿಕ ಮೋಟಾರಿಕೃತ ಮತ್ತು ಸಾಂಪ್ರದಾಯಿಕ ದೋಣಿಗಳಿವೆ. ಉಡುಪಿ ಜಿಲ್ಲೆಯ ಹೆಜಮಾಡಿ ಯಿಂದ ಬೆಂಗ್ರೆವರೆಗೆ ಸುಮಾರು 32 ಮಾಟುಬಲೆ ಗುಂಪುಗಳಿವೆ. ಪ್ರತಿಯೊಂದು ಗುಂಪುಗಳಲ್ಲಿ ಸುಮಾರು 30ರಿಂದ 40 ಮಂದಿ ಮೀನುಗಾರರು ಇರುತ್ತಾರೆ. ಅದೇ ರೀತಿ ಸುಮಾರು 450 ಟ್ರಾಲ್ದೋಣಿಗಳು, 350ಕ್ಕೂ ಅಧಿಕ ಹೊಳೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಬೀಸು ಬಲೆ, ಕಂತು ಬಲೆ, ಜೆಪ್ಪು ಬಲೆಗಳಿೆ. ಅಂದಾಜು 10-15 ಕೈರಂಪಣಿಗಳಿವೆ.
ನಾಡದೋಣಿ ಕಡಲಿಗಿಳಿಯುವ ಮುನ್ನ ದಾರ ಪ್ರಕ್ರಿಯೆಗಳನ್ನು ನಡೆಸಲಾಗು ತ್ತದೆ. ಕಳೆದ ವರ್ಷದ ಮಳೆಗಾಲದಲ್ಲಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಬಲೆಗಳನ್ನು ವಿಭಜಿಸಿ ಸಂಗ್ರಹಿಸಿಡಲಾಗುತ್ತದೆ. ಈ ಋತುವಿನಲ್ಲಿ ಮಳೆಗಾಲ ಆರಂಭಗೊಂಡ ಬಳಿಕ ಕಳೆದ ವರ್ಷ ಸಂಗ್ರಹಿ ಸಿಟ್ಟ ಬಲೆಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಸಾಮೂಹಿಕವಾಗಿ ನಿಗದಿಪಡಿ ಸಿದ ದಿನದಂದು ಎಲ್ಲರು ಒಟ್ಟಾಗಿ ಬಲೆಗಳನ್ನು ಪೋಣಿಸುತ್ತಾರೆ.
ಸರಕಾರ ನಾಡದೋಣಿಗಳಿಗೆ ತಿಂಗಳವಾರು 300ಲೀಟರ್ನಂತೆ ಸೀಮೆಎಣ್ಣೆ ನೀಡುತ್ತಿದೆ. ಆದರೆ ಕಳೆದ 7 ವರ್ಷಗಳಿಂದ ಹೊಸ ಎಂಜಿನ್ಗಳಿಗೆ ಸೀಮೆಎಣ್ಣೆ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಸುಮಾರು 3000ಕ್ಕೂ ಅಧಿಕ ಹೊಸ ಔಟ್ ಬೋರ್ಡ್ ಎಂಜಿನ್ ಖರೀದಿಸಿದ್ದ ಮೀನುಗಾರರಿಗೆ ಸೀಮೆಎಣ್ಣೆಯ ಕೊರತೆ ಕಾಡುತ್ತಿದೆ. ಆದುದರಿಂದ ಸರಕಾರ ತತ್ಕ್ಷಣ ಹೆಚ್ಚುವರಿ ಸೀಮೆಎಣ್ಣೆಯನ್ನು ಬಿಡುಗಡೆಗೊಳಿಸಬೇಕು. 2017 ಹಿಂದಿನ ಮತ್ತು ಆನಂತರದ ಅವಧಿಯ ದೋಣಿಗಳ ಸಬ್ಸಿಡಿಯನ್ನೂ ಸರಕಾರ ಬಾಕಿ ಇಟ್ಟಿವೆ. ಈ ಬಗ್ಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಪ್ರಾಥಮಿಕ ವಿವಿದ್ದೋ ದೇಶ ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್.ಕೆ. ತಿಳಿಸಿದ್ದಾರೆ.