ಮೋಂಟುಗೋಳಿ: ವಿದ್ಯುತ್ ಶಾಕ್ ತಗುಲಿ ಮೂರು ಹಸುಗಳ ಸಾವು
ಕೊಣಾಜೆ : ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಮೋಂಟುಗೋಳಿಯ ಪದಿಂಜಾರ್ ಬಳಿಯ ರಸ್ತೆಯ ಬದಿಯಲ್ಲಿ ವಿದ್ಯುತ್ ಶಾಖ್ ಹೊಡೆದು ಮೂರು ದನಗಳು ಸಾವನ್ನಪ್ಪಿರುವ ಘಟನೆ ಬುಧವಾರ ಸಂಭವಿಸಿದೆ.
ಬೀರೂರು ಚಂದ್ರಹಾಸ್ ಶೆಟ್ಟಿ ಎಂಬವರಿಗೆ ಸೇರಿದ ಹಸುಗಳಾಗಿದೆ ಎಂದು ತಿಳಿದು ಬಂದಿದೆ.
ಹಸುಗಳು ಸತ್ತು ಬಿದ್ದಿರುವ ಸ್ಥಳದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬವಿದ್ದು ವಿದ್ಯುತ್ ಶಾಖ್ ಹೊಡೆದು ಹಸುಗಳು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಗ್ರಾಮ ಕರಣಿಕ ಪ್ರಸಾದ್ ಅವರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story