ರಾಜ್ಯದ 8 ಜಿಲ್ಲೆಗಳಿಗೆ ಜೂ.25ರಿಂದ ಎಸಿ ಬಸ್ ಸಂಚಾರ ಪ್ರಾರಂಭ
ಬೆಂಗಳೂರು, ಜೂ.24: ಕೆಎಸ್ಆರ್ಟಿಸಿ ಜೂ.25ರಿಂದ ಮೊದಲ ಹಂತವಾಗಿ 8 ಜಿಲ್ಲೆಗಳಿಗೆ ಎಸಿ ಬಸ್ ಸಂಚಾರ ಸೇವೆ ಪುನರ್ ಆರಂಭಿಸಲಿದೆ.
ಮೊದಲ ಹಂತದಲ್ಲಿ ಬೆಂಗಳೂರಿನಿಂದ ಕೆಲ ನಿಗದಿತ ಸ್ಥಳಗಳಿಗೆ ಸಂಚಾರ ಕಾರ್ಯಾಚರಣೆ ಪ್ರಾರಂಭಿಸಲಿದ್ದು, ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಬೆಂಗಳೂರಿನಿಂದ ಎಸಿ ಬಸ್ಗಳ ಸಂಚಾರ ಪ್ರಾರಂಭವಾಗಲಿದೆ ಎಂದು ಕೆಎಸ್ಸಾರ್ಟಿಸಿ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story