ಮಾನಸಿಕ ಅಸ್ವಸ್ಥ ಬಾವಿಗೆ ಬಿದ್ದು ಮೃತ್ಯು
ಕುಂದಾಪುರ, ಜೂ.24: ಇತ್ತೀಚೆಗೆ ಸರಿಯಾಗಿ ಕೆಲಸವಿಲ್ಲದೇ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರು ಜೂ.21ರ ರಾತ್ರಿ 11ಗಂಟೆಯಿಂದ ಜೂ.23ರ ಸಂಜೆ 3 ಗಂಟೆ ಮಧ್ಯಾವಧಿಯಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬಸ್ರೂರು ಗ್ರಾಮದ ಮಾರ್ಗೋಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಮಾರ್ಗೋಳಿಯ ಬಸವ ಪೂಜಾರಿ ಎಂಬವರ ಮಗ ಗೋವಿಂದ ಪೂಜಾರಿ(48) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಇವರು ಐದು ತಿಂಗಳ ಹಿಂದೆ ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಕೆಲಸ ಇಲ್ಲದೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಇವರು, ಮನೆ ಬಿಟ್ಟು ಹೋದವರು ದಾರಿ ತಪ್ಪಿಆಕಸ್ಮಿಕವಾಗಿ ಮನೆ ಸಮೀಪದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story