ಎನ್ಆರ್ಸಿ ವಿರೋಧಿ ಹೋರಾಟಗಾರರ ಬಿಡುಗಡೆ ಒತ್ತಾಯ: ಎಐಎಂಎಸ್ಸೆಸ್ ವತಿಯಿಂದ ಆನ್ಲೈನ್ ಚಳವಳಿ
![ಎನ್ಆರ್ಸಿ ವಿರೋಧಿ ಹೋರಾಟಗಾರರ ಬಿಡುಗಡೆ ಒತ್ತಾಯ: ಎಐಎಂಎಸ್ಸೆಸ್ ವತಿಯಿಂದ ಆನ್ಲೈನ್ ಚಳವಳಿ ಎನ್ಆರ್ಸಿ ವಿರೋಧಿ ಹೋರಾಟಗಾರರ ಬಿಡುಗಡೆ ಒತ್ತಾಯ: ಎಐಎಂಎಸ್ಸೆಸ್ ವತಿಯಿಂದ ಆನ್ಲೈನ್ ಚಳವಳಿ](https://www.varthabharati.in/sites/default/files/images/articles/2020/06/25/248693-1593101575.jpg)
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.25: ಯುಎಪಿಎ(ಕಾನೂನುಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ)ಯಡಿ ಬಂಧಿಸಿರುವ ಎನ್ಆರ್ಸಿ-ಸಿಎಎ ವಿರೋಧಿ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ದೇಶವ್ಯಾಪಿ ಆನ್ಲೈನ್ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆ ವಿರುದ್ದದ ಜನ ಹೋರಾಟಗಳನ್ನು ದಿಕ್ಕು ತಪ್ಪಿಸಲು ಕೇಂದ್ರ ಸರಕಾರ ಎನ್ಆರ್ಸಿ, ಸಿಎಎ ಕಾಯ್ದೆಗಳನ್ನು ಜಾರಿಗೆ ತಂದು ಧರ್ಮದ ಆಧಾರದ ಮೇಲೆ ಜನಗಳನ್ನು ಒಡೆಯುವ ಹುನ್ನಾರ ನಡೆಸಿತ್ತು. ಈ ಕಾಯ್ದೆಗಳ ವಿರುದ್ಧ ಹೋರಾಟ ಮಾಡಿದ ನಾಯಕರು ಹಾಗೂ ಕಾರ್ಯಕರ್ತರನ್ನು ಯಾವುದೇ ಆಧಾರವಿಲ್ಲದೆ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸುವ ಬದಲು ಕೇಂದ್ರ ಸರಕಾರ ಪ್ರಜಾತಂತ್ರ ವಿರೋಧಿ ಕೃತ್ಯಗಳಲ್ಲಿ ತೊಡಗಿದೆ. ಇದು ಸಂವಿಧಾನದ ವಿರೋಧಿ ಕ್ರಮವಾಗಿದ್ದು, ಕೂಡಲೇ ಯುಎಪಿಎ ಅಡಿಯಲ್ಲಿ ಬಂಧಿಸಿರುವ ಸಿಎಎ ವಿರೋಧಿ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಎಐಎಮ್ಎಸ್ಸೆಸ್ನ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ನಿರ್ಮಲಾ ಆಗ್ರಹಿಸಿದ್ದಾರೆ.