ಜೆಡಿಎಸ್ನಿಂದ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಭೆ
ಉಡುಪಿ, ಜೂ.25: ಲಡಾಖ್ನ ಗುರುವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಜೊತೆ ಸಂಘರ್ಷದಲ್ಲಿ ವೀರ ಮರಣವನ್ನು ಹೊಂದಿದ ಭಾರತದ ಹುತಾತ್ಮ ಸೈನಿಕರಿಗೆ ಉಡುಪಿ ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಜಿಲ್ಲಾ ಕಛೇರಿ ಕುಮಾರಕೃಪಾದಲ್ಲಿ ಜೂ.24ರಂದು ಆಯೋಜಿಸಲಾಗಿತ್ತು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ.ಶೆಟ್ಟಿ ಹುತಾತ್ಮ ಸೈನಿಕರ ಭಾವಚಿತ್ರಗಳಿಗೆ ಪುಷ್ಪಗಳನ್ನು ಅರ್ಪಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ವಾಸುದೇವ್ ರಾವ್, ನಾಯಕರುಗಳಾದ ಕಿಶೋರ್ ಕುಂದಾಪುರ, ರಂಜಿತ್ ಶೆಟ್ಟಿ ಬೈಂದೂರ್, ನಾಗರಾಜ್ ಭಟ್ ಕೆಮ್ತೂರ್, ಖಾದರ್ ಕುಂಜಾಲು, ಶೇಕರ್ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ರಝಾಕ್ ಉಚ್ಚಿಲ, ಹಮೀದ್ ಯೂಸುಫ್, ರಫೀಕ್, ಇಬ್ರಾಹಿಂ ತವಕ್ಕಲ್, ಶ್ರೀಕಾಂತ್ ಹೆಬ್ರಿ, ಚೆರೆ ಮೋನ್, ಇಕ್ಬಾಲ್ ಉಚ್ಚಿಲ, ಬಾಲಕೃಷ್ಣ ಕೆಪ್ಪೆಟ್ಟು, ಹರಿಣಿ, ಮಮತಾ, ವಸುಮತಿ ಸಾಲಿಗ್ರಾಮ, ರಂಗನಾಥ್ ಕೋಟ್ಯಾನ್, ಸನವರ್ ಉಪಸ್ಥಿತರಿದ್ದರು.
Next Story