ಪೊಲೀಸರ ಜೊತೆ ಜನರು ಕೂಡ ಕೊರೋನ ಸೈನಿಕರಾಗಬೇಕು: ಭಾಸ್ಕರ್ ರಾವ್
ಬೆಂಗಳೂರು, ಜೂ.25: ಬೆಂಗಳೂರು ಪೊಲೀಸರ ಜೊತೆ ನಗರದಲ್ಲಿ ವಾಸಿಸುವ ಜನರು ಕೂಡ ಕೊರೋನ ಸೈನಿಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ಬೆಂಗಳೂರು ಪೊಲೀಸರ ಜೊತೆ ನಗರದಲ್ಲಿ ವಾಸಿಸುವ ಜನರು ಕೂಡ ಕೊರೋನ ಸೈನಿಕರಾಗಬೇಕು. ಅದೇ ರೀತಿ, ಎಲ್ಲ ಸಂಸ್ಥೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವ ಜೊತೆಗೆ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಇವೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿದ್ದಲ್ಲಿ ನೀವೆಲ್ಲಾ ಕೊರೋನ ಸೈನಿಕರಾಗಬಹುದು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
Next Story