ದಿ.ಕಾಂ.ಶ್ರೀನಿವಾಸ್ ಬಜಾಲ್ ಸ್ಮರಣಾರ್ಥ ಡಿವೈಎಫ್ ಐ ವತಿಯಿಂದ ರಕ್ತದಾನ
ಮಂಗಳೂರು : ಡಿವೈಎಫ್ಐ ನಾಯಕ ಕಾಂ ಶ್ರೀನಿವಾಸ್ ಬಜಾಲ್ ಅವರ 18 ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗು ಮಾಸ್ಕ್ , ಸ್ಯಾನಿ ಟೈಸರ್ ವಿತರಿಸಲಾಯಿತು.
ರಕ್ತದಾನ ಕಾರ್ಯಕ್ರಮದ ಉದ್ಘಾಟನೆಯನ್ನು ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ ನೆರವೇರಿಸಿದರು. ಈ ವೇಳೆ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಜಿತ್ ಶೆಟ್ಟಿ ವಾಮಂಜೂರು, ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐ ಮುಖಂಡ ದೀಪಕ್ ಬೊಲ್ಲ ವಹಿಸಿದ್ದರು. ಡಿವೈಎಫ್ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ದಿರಾಜ್ ಪಕ್ಕಲಡ್ಕ ಸ್ವಾಗತ ಕೋರಿ ವರಪ್ರಸಾದ್ ವಂದಿಸಿದರು. ಶಿಬಿರದಲ್ಲಿ 50ಕ್ಕೂ ಮಿಕ್ಕಿ ಕಾರ್ಯಕರ್ತರು ರಕ್ತದಾನ ಮಾಡಿದರು.