ಎಸ್ಬಿಐಯಿಂದ ಎಂಎಸ್ಎಂಇ ಗ್ರಾಹಕರಿಗಾಗಿ ಕೂಟ
ಉಡುಪಿ, ಜೂ.28: ಅಂತಾರಾಷ್ಟ್ರೀಯ ಎಂಎಸ್ಎಂಇ ದಿನಾಚರಣೆಯ ಪ್ರಯುಕ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ತಮ್ಮ ಎಂಎಸ್ ಎಂಇ ಗ್ರಾಹಕರಿಗಾಗಿ ವಿಭಿನ್ನ ರೀತಿಯಲ್ಲಿ ಕೂಟವನ್ನು ಜೂ.26ರಂದು ಆಯೋಜಿಸಲಾಗಿತ್ತು.
ಮಂಗಳೂರು ಆಡಳಿತ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳೂರು, ಹಾಸನ, ತುಮಕೂರು ಮತ್ತು ಉಡುಪಿ ಜಿಲ್ಲೆಯ ಗ್ರಾಹಕರನ್ನು ಉದ್ದೇಶಿಸಿ ಉಪ ಮಹಾಪ್ರಬಂಧಕ ರಾಜೇಶ್ ಗುಪ್ತಾ, ಕೋವಿಡ್-19 ನಂತರದ ದಿನಗಳಲ್ಲಿ ಎಂಎಸ್ಎಂಇ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ನೀಡಲಾದ ಹಣಕಾಸು ನೆರವು ಹಾಗೂ ವಿವಿಧ ಸಾಲ ಯೋಜನೆಗಳ ಬಗ್ಗೆ ವಿವರಿಸಿದರು.
ಗ್ರಾಹಕರೊಂದಿಗೆ ಪ್ರಾದೇಶಿಕ ವ್ಯವಹಾರ ಕಚೇರಿಯ ಸಹಾಯಕ ಮಹಾ ಪ್ರಭಂದಕರು ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದರು. ಗ್ರಾಹಕರಿಗೆ ಸಾಲ ಸೌಲಭ್ಯದ ಮಾಹಿತಿಯನ್ನು ಇ- ಮೀಟಿಂಗ್ ಮೂಲಕ ತಿಳಿಸ ಲಾಯಿತು. ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯ ಸಹಾಯಕ ಮಹಾ ಪ್ರಬಂಧಕ ತರುಣ್ ಫಾಯದೆ ಉಪಸ್ಥಿತರಿದ್ದರು.
Next Story