ಎಮ್.ಎನ್.ಜಿ ಫೌಂಡೇಶನ್ ವತಿಯಿಂದ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ
ಮಂಗಳೂರು : ಎಮ್.ಎನ್.ಜಿ ಫೌಂಡೇಶನ್ ವತಿಯಿಂದ ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನಡೆಸಲಾಯಿತು.
ಹರೇಕಳ ಗ್ರಾಮದಲ್ಲಿ ವಾಸಿಸುತ್ತಿರುವ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ, ಕುಟುಂಬದ ಆಧಾರವಾಗಿದ್ದ ನಿಸಾರ್ ಎಂಬವರು ಕಳೆದ ಆರು ವರ್ಷಗಳಿಂದ ತೀರಾ ಕೈ ನೋವಿನಿಂದ ಬಳಲುತ್ತಿದ್ದು, ವಾಸಿಸಲು ಸರಿಯಾದ ಮೂಲ ಸೌಕರ್ಯಗಳಿಲ್ಲದೆ ಮನೆಯಲ್ಲಿ ಕಷ್ಟದಿಂದ ಇರುವ ಬಗ್ಗೆ ಸಮಾಜ ಸೇವಕ ಇಲ್ಯಾಸ್ ಮಂಗಳೂರು ಅವರ ನೇತೃತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಎಮ್ ಎನ್ ಜಿ ಫೌಂಡೇಶನ್ ಪದಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಎಮ್ ಎನ್ ಜಿ ಫೌಂಡೇಶನ್ ವತಿಯಿಂದ ದಾನಿಗಳ ಸಹಾಯದೊಂದಿಗೆ ಹರೇಕಳದಲ್ಲಿ ನಿಸಾರ್ ಅವರಿಗೆ ನೂತನವಾಗಿ ಮನೆ ನಿರ್ಮಿಸಿ ಕೊಡುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು, ಇದರ ಭಾಗವಾಗಿ ಇಂದು ಸಂಸ್ಥೆಯ ಗೌರವಾಧ್ಯಕ್ಷ ಮುನೀರ್ ಮೊಯ್ದಿನ್ ಹಾಗೂ ಯುವ ಉದ್ಯಮಿ ಮೊಹಮ್ಮದ್ ಶರೀಫ್ ತುಂಬೆ ನೇತೃತ್ವದಲ್ಲಿ ಸಂಸ್ಥೆಯ ಪ್ರಥಮ ಯೋಜನೆಯಾದ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನಡೆಯಿತು.
ಈ ಸಂದರ್ಭ ಹರೇಕಳ ಜುಮಾ ಮಸೀದಿ ಮುಹಝ್ಝಿನ್ ಮಾಹಿನ್ ಮುಸ್ಲಿಯಾರ್, ಮಸೀದಿ ಅಧ್ಯಕ್ಷ ಮುಸ್ತಫಾ, ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಬಶೀರ್ ಹಾಗೂ ಎಮ್ ಎನ್ ಜಿ ಫೌಂಡೇಶನ್ ಪದಾಧಿಕಾರಿಗಳಾದ ಮಹಮ್ಮದ್ ಇಲ್ಯಾಸ್ ಮಂಗಳೂರು, ಇಬ್ರಾಹಿಮ್ ಮೋನು ನಂದಾವರ, ಸಿದ್ದೀಕ್ ಕೊಳಕೆ, ನಕಾಶ್ ಬಾಂಬಿಲ, ಮಹಮ್ಮದ್ ಇಶಾಕ್ ತುಂಬೆ, ರಫೀಕ್ ಪಾನೆಲ, ಬಶೀರ್ ಪರ್ಲಡ್ಕ, ಫಯಾಝ್ ಮಾಡೂರು, ಮುಖ್ತಾರ್ ಅಕ್ಕರಂಗಡಿ, ಅನಸ್ ವಿಟ್ಲ, ಅಬ್ದುಲ್ ಜಲೀಲ್ ಉಪ್ಪಿನಂಗಡಿ, ಅಬ್ದುಲ್ ಮಜೀದ್ ಉಳ್ಳಾಲ ಹಾಗೂ ಮಹಮ್ಮದ್ ಶಾಕಿರ್ ಉಪಸ್ಥಿತರಿದ್ದರು.
ಸಂಪೂರ್ಣ ಮನೆ ನಿರ್ಮಾಣಕ್ಕೆ ಇನ್ನೂ ಸಹಾಯದ ಅವಶ್ಯಕತೆ ಇದೆ. ಯಾವುದೇ ರೀತಿಯ ಸಹಾಯವನ್ನು ಸ್ವೀಕರಿಸುತ್ತೇವೆ. ಮನೆ ನಿರ್ಮಾಣಕ್ಕೆ ಸಹಾಯ ಮಾಡುವವರು ಕೆಳಗಿನ ಖಾತೆಗೆ ಹಣ ಜಮೆ ಮಾಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನಂಬರನ್ನು ಸಂಪರ್ಕಿಸಿಬಹುದು ಎಂದು ಪ್ರಕಟನೆ ತಿಳಿಸಿದೆ.
A/c number
7532500102094701
Avvamma
IFSC CODE:
KARB0000753
Branch thokkot
Karnataka Bank
Contact number
+918073523880
+919844614338
+917349412573