Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು?

ನಿಮ್ಮ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು?

ವಾರ್ತಾಭಾರತಿವಾರ್ತಾಭಾರತಿ2 July 2020 9:30 PM IST
share
ನಿಮ್ಮ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಅಭಿಧಮನಿಗಳಲ್ಲಿಯ ರಕ್ತ ನೀಲಿ ಬಣ್ಣದ್ದಾಗಿದೆ ಎಂದು ಮಕ್ಕಳು ಕೆಲವೊಮ್ಮೆ ಭಾವಿಸಿರುತ್ತಾರೆ. ತಮ್ಮ ಮಣಿಕಟ್ಟನ್ನು ನೋಡಿಕೊಂಡರೆ ಯಾರೇ ಆದರೂ ಕ್ಷಣ ಕಾಲ ಹಾಗೆಯೇ ಭಾವಿಸಬಹುದು,ಏಕೆಂದರೆ ಅಲ್ಲಿ ಕಾಣುವ ರಕ್ತನಾಳಗಳು ನೀಲಿ ಛಾಯೆಯನ್ನು ಹೊಂದಿರುತ್ತವೆ. ರಕ್ತ ಕೆಂಪು ಬಣ್ಣವನ್ನು ಹೊಂದಿದೆಯೇ? ಖಂಡಿತವಾಗಿಯೂ ಇಲ್ಲ. ರಕ್ತದ ಕುರಿತು ಪ್ರತಿಯೊಬ್ಬರಿಗೂ ಗೊತ್ತಿರಬೇಕಾದ ಇಂತಹ ಹಲವಾರು ಅಂಶಗಳಿವೆ. ನಮ್ಮ ಶರೀರದಲ್ಲಿ ಎಷ್ಟು ರಕ್ತವಿರುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ರಕ್ತವು ಮಾನವ ಶರೀರದ ಅಗತ್ಯ ಘಟಕವಾಗಿದೆ. ಅದು ಶರೀರದ ಎಲ್ಲ ಅಂಗಗಳಿಗೆ ಆಮ್ಲಜನಕದ ಸಾಗಾಣಿಕೆದಾರನಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಪ್ರಮುಖ ಪೋಷಕಾಂಶಗಳನ್ನೂ ತನ್ನೊಂದಿಗೆ ಸಾಗಿಸುತ್ತದೆ.

   ರಕ್ತದ ಬಣ್ಣ ಕೆಂಪಾಗಿದ್ದರೂ ಅದರಲ್ಲಿಯ ಆಮ್ಲಜನಕದ ಮಟ್ಟವನ್ನ್ನು ಅವಲಂಬಿಸಿ ಛಾಯೆ ಬದಲಾಗಬಹುದು. ಕೆಂಪು ರಕ್ತಕಣಗಳಲ್ಲಿರುವ ಸಂಕೀರ್ಣ ಪ್ರೋಟಿನ್ ಆಗಿರುವ ಹಿಮೊಗ್ಲೋಬಿನ್ ಕಬ್ಬಿಣವನ್ನು ಒಳಗೊಂಡಿರುತ್ತದೆ. ಈ ಕಬ್ಬಿಣವು ಆಮ್ಲಜನಕದೊಂದಿಗೆ ಪ್ರತಿವರ್ತಿಸುತ್ತದೆ ಮತ್ತು ರಕ್ತಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ. ಅಪಧಮನಿಗಳು ಹೃದಯದಿಂದ ಶರೀರದ ಇತರ ಅಂಗಾಂಗಗಳಿಗೆ ರಕ್ತವನ್ನು ಸಾಗಿಸುತ್ತವೆ. ಅಪಧಮನಿಗಳಲ್ಲಿಯ ರಕ್ತವು ಆಮ್ಲಜನಕದಿಂದ ಸಮೃದ್ಧವಾಗಿರುತ್ತದೆ ಮತ್ತು ಇದೇ ಕಾರಣಕ್ಕೆ ಅದು ಪ್ರಖರ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಅಭಿಧಮನಿಗಳು ಅಂಗಾಂಗಗಳಿಂದ ರಕ್ತವನ್ನು ಹೃದಯಕ್ಕೆ ವಾಪಸ್ ಸಾಗಿಸುತ್ತವೆ. ಇವುಗಳಲ್ಲಿಯ ರಕ್ತವು ಆಮ್ಲಜನಕರಹಿತವಾಗಿರುತ್ತದೆ. ಇಲ್ಲಿಯೂ ರಕ್ತ ಕೆಂಪು ಬಣ್ಣದ್ದಾಗಿದ್ದರೂ ಆಮ್ಲಜನಕದ ಕೊರತೆಯಿಂದಾಗಿ ಗಾಢ ಛಾಯೆಯನ್ನು ಹೊಂದಿರುತ್ತದೆ. ಕೆಂಪು ಬಣ್ಣದ ಗಾಢ ಛಾಯೆ ಮತ್ತು ಬೆಳಕು ಚರ್ಮವನ್ನು ಹಾದುಹೋಗುವ ರೀತಿಯಿಂದಾಗಿ ಅಭಿಧಮನಿಗಳಲ್ಲಿನ ರಕ್ತ ನೀಲಿ ಬಣ್ಣವಾಗಿರುವಂತೆ ಕಂಡು ಬರುತ್ತದೆ.

ರಕ್ತವು ಮಾನವ ಶರೀರದ ಅಗತ್ಯ ಘಟಕವಾಗಿದೆ. ಶರೀರದ ಎಲ್ಲ ಅಂಗಗಳಿಗೆ ಆಮ್ಲಜನಕದ ಜೊತೆಗೆ ಪೋಷಕಾಂಶಗಳನ್ನೂ ಪೂರೈಸುವ ಅದು ತನ್ನ ಕೋಶರಹಿತ ಭಾಗವಾದ ಪ್ಲಾಸ್ಮಾದ ಮೂಲಕ ‘ಬಾಡಿ ವಾಲ್ಯೂಮ್’ ಅನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ. ವ್ಯಕ್ತಿಯ ಶರೀರವು ರಕ್ತಸ್ರಾವವು ಅಪಘಾತಗಳ ಸಂದರ್ಭದಲ್ಲಿಯಂತೆ ಏಕಾಏಕಿ ಉಂಟಾಗುವಂತೆ ತೀವ್ರವೋ ಅಥವಾ ಹೊಟ್ಟೆಯ ಹುಣ್ಣುಗಳಲ್ಲಿಯಂತೆ ನಿಧಾನವೋ ಎನ್ನುವುದನ್ನು ಅವಲಂಬಿಸಿ ರಕ್ತದ ನಷ್ಟವನ್ನು ನಿಭಾಯಿಸಿಕೊಳ್ಳುತ್ತದೆ. ಏಕಾಏಕಿ ಶೇ.20ಕ್ಕಿಂತ ಹೆಚ್ಚಿನ ರಕ್ತ ನಷ್ಟವು ಮಾರಣಾಂತಿಕವಾಗಬಲ್ಲದು ಮತ್ತು ತಕ್ಷಣವೇ ರಕ್ತದ ಮರುಪೂರಣ ಆಗಬೇಕಾಗುತ್ತದೆ. ಕ್ರಮೇಣ ರಕ್ತ ನಷ್ಟವನ್ನು ಅದನ್ನುಂಟು ಮಾಡಿರುವ ಕಾರಣಕ್ಕೆ ಚಿಕಿತ್ಸೆ ನೀಡುವ ಮೂಲಕ ನಿಭಾಯಿಸಬೇಕಾಗುತ್ತದೆ.

ರಕ್ತದಲ್ಲಿ ವಿವಿಧ ಮಾದರಿಗಳಿದ್ದು,ಇದು ಕೆಂಪು ರಕ್ತಕಣ (ಆರ್‌ಬಿಸಿ)ಗಳ ಮೇಲ್ಮೈಯಲ್ಲಿನ ನಿರ್ದಿಷ್ಟ ಆ್ಯಂಟಿಜನ್‌ಗಳು ಅಥವಾ ಪ್ರತಿಜನಕಗಳು ಮತ್ತು ಅದಕ್ಕೆ ಅನುಗುಣವಾಗಿ ಆ್ಯಂಟಿಬಾಡಿಗಳು ಅಥವಾ ಪ್ರತಿಕಾಯಗಳ ಅಸ್ತಿತ್ವವನ್ನು ಅವಲಂಬಿಸಿರುತ್ತದೆ. ಆ್ಯಂಟಿಜನ್‌ಗಳ ಆಧಾರದಲ್ಲಿ ರಕ್ತವನ್ನು ಎ,ಬಿ,ಎಬಿ ಮತ್ತು ಒ ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಎ ಮತ್ತು ಬಿ ಮಾನವರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಆ್ಯಂಟಿಜನ್‌ಗಳಾಗಿವೆ. ‘ಒ’ ಗುಂಪಿನ ಜನರ ರಕ್ತದಲ್ಲಿ ಎ ಅಥವಾ ಬಿ ಆ್ಯಂಟಿಜನ್ ಇರುವುದಿಲ್ಲ ಮತ್ತು ಎಬಿ ಗುಂಪು ಎರಡೂ ಆ್ಯಂಟಿಜನ್‌ಗಳನ್ನು ಹೊಂದಿರುತ್ತದೆ.‘ ಒ’ ಭಾರತದಲ್ಲಿ ಕಂಡು ಬರುವ ಹೆಚ್ಚು ಸಾಮಾನ್ಯ ರಕ್ತದ ಗುಂಪಾಗಿದೆ. ರೆಸಸ್ ಫ್ಯಾಕ್ಟರ್ ಮಾನವ ಶರೀರದಲ್ಲಿ ಕಂಡು ಬರುವ ಇನ್ನೊಂದು ಆ್ಯಂಟಿಜನ್ ಆಗಿದ್ದು,ಇದು ಪ್ರೋಟಿನ್ ಆಗಿದೆ. ಈ ಪ್ರೋಟಿನ್ ಹೊಂದಿದವರನ್ನು ಆರ್‌ಎಚ್ ಪಾಸಿಟಿವ್ ಮತ್ತು ಹೊಂದಿಲ್ಲದವರನ್ನು ಆರ್‌ಎಚ್-ನೆಗೆಟಿವ್ ಎಂದು ವರ್ಗೀಕರಿಸಲಾಗಿದೆ.

ಅಂದ ಹಾಗೆ ಬಿಳಿಯ ರಕ್ತಕಣ (ಡಬ್ಲುಬಿಸಿ)ಗಳು ಮುಖ್ಯವೇ? ಬಿಳಿಯ ರಕ್ತಕಣಗಳು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಿವೆ. ಬಿಳಿಯ ರಕ್ತಕಣಗಳಲ್ಲಿ ಹಲವಾರು ವಿಧಗಳಿದ್ದು, ಪ್ರತಿಯೊಂದೂ ತನ್ನದೇ ಆದ ಪ್ರಮುಖ ಪಾತ್ರವನ್ನು ಹೊಂದಿದೆ. ವೈರಸ್ ಅಥವಾ ಬ್ಯಾಕ್ಟೀರಿಯಾ ಅಥವಾ ಶರೀರವನ್ನು ಪ್ರವೇಶಿಸುವ ಯಾವುದೇ ಬಾಹ್ಯ ಕಾಯದ ವಿರುದ್ಧ ಹೋರಾಡಲು ಸಾಕಷ್ಟು ಸಂಖ್ಯೆಯಲ್ಲಿ ಬಿಳಿಯ ರಕ್ತಕಣಗಳನ್ನು ಹೊಂದಿರುವುದು ಅಗತ್ಯವಾಗಿದೆ.

ಮಾನವನ ಶರೀರದಲ್ಲಿ ಎಷ್ಟು ರಕ್ತವಿರುತ್ತದೆ? ಶರೀರದ ಮೇಲ್ಮೈಯನ್ನು ಅವಲಂಬಿಸಿ ರಕ್ತದ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಣ್ಣ ಶರೀರವನ್ನು ಹೊಂದಿರುವ ವ್ಯಕ್ತಿಗೆ ಹೋಲಿಸಿದರೆ ದೊಡ್ಡ ಶರೀರದ ವ್ಯಕ್ತಿ ಹೆಚ್ಚು ರಕ್ತವನ್ನು ಹೊಂದಿರುತ್ತಾನೆ. ವಯಸ್ಕ ವ್ಯಕ್ತಿಯ ಶರೀರದಲ್ಲಿ ಮೂರೂವರೆ ಲೀ.ನಿಂದ ಐದೂವರೆ ಲೀಟರ್‌ವರೆಗೂ ರಕ್ತವಿರುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X