Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉಯಿಘರ್ ಮುಸ್ಲಿಮರ ಮೊಬೈಲ್ ಗಳಿಗೆ ಕನ್ನ...

ಉಯಿಘರ್ ಮುಸ್ಲಿಮರ ಮೊಬೈಲ್ ಗಳಿಗೆ ಕನ್ನ ಹಾಕುತ್ತಿರುವ ಚೀನಿ ಸಾಫ್ಟ್‌ವೇರ್‌ಗಳು

ಸಂಶೋಧನಾ ವರದಿ

ವಾರ್ತಾಭಾರತಿವಾರ್ತಾಭಾರತಿ2 July 2020 10:27 PM IST
share
ಉಯಿಘರ್ ಮುಸ್ಲಿಮರ ಮೊಬೈಲ್ ಗಳಿಗೆ ಕನ್ನ ಹಾಕುತ್ತಿರುವ ಚೀನಿ ಸಾಫ್ಟ್‌ವೇರ್‌ಗಳು

ತೈಪೆ (ತೈವಾನ್), ಜು. 2: ಪಶ್ಚಿಮ ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ಪೊಲೀಸರು ಪ್ರಬಲ ಕಣ್ಗಾವಲು ಕ್ಯಾಮರಗಳನ್ನು ಅಳವಡಿಸುವ ಮೊದಲೇ ಹಾಗೂ ಲಕ್ಷಾಂತರ ಜನಾಂಗೀಯ ಅಲ್ಪಸಂಖ್ಯಾತರನ್ನು ಬಂಧನ ಕೇಂದ್ರಗಳಲ್ಲಿ ಕೂಡಿ ಹಾಕುವುದಕ್ಕೂ ಮೊದಲೇ, ಅಲ್ಲಿನ ನಿವಾಸಿಗಳ ಮೇಲೆ ನಿಗಾ ಇಡಲು ಚೀನಾದ ಹ್ಯಾಕರ್‌ಗಳು ದುರುದ್ದೇಶದ ಸಾಫ್ಟ್‌ ವೇರ್‌ ಗಳನ್ನು ಅಭಿವೃದ್ಧಿಪಡಿಸಿದ್ದರು ಎನ್ನುವುದನ್ನು ಪರಿಣತರು ಪತ್ತೆಹಚ್ಚಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಮೊಬೈಲ್ ಫೋನ್‌ಗಳಿಗೆ ಕನ್ನ ಹಾಕುವ ಚೀನಾದ ಅಭಿಯಾನವು 2013ರಷ್ಟು ಹಿಂದೆಯೇ ಆರಂಭಗೊಂಡಿತ್ತು ಹಾಗೂ ಇಂದಿಗೂ ಮುಂದುವರಿಯುತ್ತಿದೆ ಎಂದು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಮೊಬೈಲ್ ಸುರಕ್ಷತಾ ಕಂಪೆನಿ ‘ಲುಕೌಟ್’ನ ಸಂಶೋಧಕರು ಬುಧವಾರ ಹೇಳಿದ್ದಾರೆ. ಜನರ ಸ್ಮಾರ್ಟ್‌ಫೋನ್‌ಗಳಿಂದ ಮಾಹಿತಿಗಳನ್ನು ಅಗೋಚರವಾಗಿ ಕದಿಯುವುದು ಈ ಬೇಹುಗಾರಿಕಾ ಅಭಿಯಾನದ ಒಂದು ಭಾಗವಾಗಿತ್ತು.

ಫೋನ್‌ಗಳ ಹ್ಯಾಕಿಂಗ್‌ನಲ್ಲಿ ಬಳಸಲಾಗುತ್ತಿರುವ ಎಂಟು ಮಾದರಿಯ ಕಳ್ಳ ಸಾಫ್ಟ್‌ವೇರ್‌ಗಳ ನಡುವೆ ಕೊಂಡಿ ಇರುವುದನ್ನು ಲುಕೌಟ್ ಪತ್ತೆಹಚ್ಚಿದೆ. ಇದು, ಕ್ಸಿನ್‌ಜಿಯಾಂಗ್‌ನ ಬಹುತೇಕ ಮುಸ್ಲಿಮ್ ಉಯಿಘರ್ ನಿವಾಸಿಗಳು ಬಳಸುವ ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಚೀನಾ ಸರಕಾರದೊಂದಿಗೆ ಸಂಪರ್ಕ ಹೊಂದಿರುವ ಗುಂಪುಗಳು ಹೇಗೆ ಕನ್ನಹಾಕುತ್ತಿವೆ ಎನ್ನುವುದನ್ನು ಸೂಚಿಸುತ್ತವೆ ಎಂದು ಅದು ಹೇಳಿದೆ. ಉಯಿಘರ್ ಮುಸ್ಲಿಮರ ಫೋನ್‌ಗಳಿಗೆ ಕನ್ನ ಹಾಕುವ ದಂಧೆಯು ಈಗ ಭಾವಿಸಿರುವುದಕ್ಕಿಂತಲೂ ಅಗಾಧ ಹೆಚ್ಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎನ್ನುವುದನ್ನು ಲುಕೌಟ್ ಬಹಿರಂಗಪಡಿಸಿದೆ.

ಪಲಾಯನಗೈದವರನ್ನೂ ಬೆಂಬತ್ತಿದ ಬೇಹು ಸಾಫ್ಟ್‌ವೇರ್‌ಗಳು!

ಚೀನಾದ ಕಿರುಕುಳಕ್ಕೆ ಬೇಸತ್ತು 15 ರಷ್ಟು ದೇಶಗಳಿಗೆ ಪಲಾಯನಗೈದ ಉಯಿಘರ್ ಮುಸ್ಲಿಮರನ್ನು ಬೆಂಬತ್ತಲು ಚೀನಾದ ದೊರೆಗಳು ದೃಢನಿರ್ಧಾರ ಮಾಡಿರುವುದೂ ಈಗ ಬೆಳಕಿಗೆ ಬಂದಿದೆ. ಇದಕ್ಕಾಗಿ ರೂಪಿಸಲಾಗಿರುವ ವಿಶೇಷ ಸಾಫ್ಟ್‌ವೇರ್‌ಗಳನ್ನು ಕನ್ನಗಾರರು ಉಯಿಘರ್‌ ಗಳು ಬಳಸುವ ವಿಶೇಷ ಕೀಬೋರ್ಡ್‌ಗಳಲ್ಲಿ ಅಡಗಿಸಿಸಿಟ್ಟಿದ್ದರು ಹಾಗೂ ಥರ್ಡ್‌ಪಾರ್ಟಿ (ಹೊರಗಿನ) ವೆಬ್‌ಸೈಟ್‌ಗಳಲ್ಲಿ ಸಾಮಾನ್ಯ ಬಳಕೆಯ ಆ್ಯಪ್‌ಗಳ ರೂಪದಲ್ಲಿ ಹರಿಯಬಿಟ್ಟಿದ್ದರು.

 ಈ ಸಾಫ್ಟ್‌ವೇರ್‌ಗಳು ತಾವೇ ಫೋನ್‌ಗಳ ಮೈಕ್ರೋಫೋನ್‌ಗಳನ್ನು ತೆರೆಯಬಲ್ಲವು, ಫೋನ್ ಕರೆಗಳನ್ನು ಧ್ವನಿಮುದ್ರಿಸಿಕೊಳ್ಳಬಲ್ಲವು ಹಾಗೂ ಚಿತ್ರಗಳು, ಫೋನ್ ಇರುವ ಸ್ಥಳ ಮತ್ತು ಚಾಟಿಂಗ್ ಆ್ಯಪ್‌ಗಳಲ್ಲಿ ಮಾಡುವ ಸಂಭಾಷಣೆಗಳನ್ನು ನಿರ್ದಿಷ್ಟ ವಿಳಾಸಗಳಿಗೆ ಕಳುಹಿಸಬಲ್ಲವು. ಕೆಲವು ಕಳ್ಳ ಸಾಫ್ಟ್‌ವೇರ್‌ಗಳನ್ನು ಉಯಿಘರ್ ಭಾಷೆಯ ಸುದ್ದಿ, ಉಯಿಘರ್ ‌ಗಳನ್ನು ಉದ್ದೇಶಿಸಿದ ಸೌಂದರ್ಯ ಸಲಹೆಗಳು, ಕುರ್‌ಆನ್ ಮುಂತಾದ ಧಾರ್ಮಿಕ ಬರಹಗಳನ್ನು ಒದಗಿಸುವ ಆ್ಯಪ್‌ಗಳಲ್ಲಿ ಹುದುಗಿಸಿಡಲಾಗಿತ್ತು ಎಂದು ಲುಕೌಟ್ ಸಂಸ್ಥೆಯ ಸಂಶೋಧಕರು ಹೇಳುತ್ತಾರೆ.

‘‘ಚೀನಾದ ಉಯಿಘರ್‌ಗಳು ಎಲ್ಲೇ ಹೋದರೂ, ಟರ್ಕಿ, ಇಂಡೋನೇಶ್ಯ ಅಥವಾ ಸಿರಿಯ- ಹೀಗೆ ಎಷ್ಟೇ ದೂರ ಹೋದರೂ, ಬೇಹುಗಾರಿಕಾ ಸಾಪ್ಟ್‌ವೇರ್ ಅವರನ್ನು ಬೆಂಬತ್ತುತ್ತಿತ್ತು’’ ಎಂದು ‘ಲುಕೌಟ್’ ಸಂಸ್ಥೆಯಲ್ಲಿ ತ್ರೆಟ್ ಇಂಟಲಿಜನ್ಸ್ ಇಂಜಿನಿಯರ್ ಆಗಿರುವ ಅಪೂರ್ವ ಕುಮಾರ್ ಹೇಳುತ್ತಾರೆ. ‘‘ಇದು ಆಕ್ರಮಣಕಾರಿ ಪ್ರಾಣಿಯೊಂದು ತನ್ನ ಬಲಿಯನ್ನು ಜಗತ್ತಿನಾದ್ಯಂತ ಬೆನ್ನತ್ತಿದ ಹಾಗೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಫೋನ್ ವಶಪಡಿಸಿ ಬೇಹು ಸಾಫ್ಟ್‌ವೇರ್ ಹಾಕಿದ ಪೊಲೀಸರು

2015ರಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ಜನಾಂಗೀಯ ಹಿಂಸಾಚಾರ ಸಂಭವಿಸಿದ ಬಳಿಕ, ಜನರು ಆನ್‌ಲೈನ್‌ನಲ್ಲಿ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಅಧಿಕಾರಿಗಳು ಹೊಸ ಕಾರ್ಯಾಚರಣೆಯೊಂದನ್ನು ನಡೆಸಿದರು. ಕ್ಸಿನ್‌ಜಿಯಾಂಗ್‌ನ ಬೀದಿಗಳಲ್ಲಿ ಉಯಿಘರ್‌ಗಳ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು. ಹಲವು ಪ್ರಕರಣಗಳಲ್ಲಿ, ಫೋನ್‌ಗಳಿಗೆ ಹೊಸ ಬೇಹು ಸಾಫ್ಟ್‌ವೇರ್ ಅಳವಡಿಸಿ ತಿಂಗಳುಗಳ ಬಳಿಕ ಮರಳಿಸಿದರು. ಕೆಲವು ಪ್ರಕರಣಗಳಲ್ಲಿ ಬೇರೆಯದೇ ಆದ ಫೋನ್‌ ಗಳನ್ನು ನೀಡಲಾಯಿತು. ಹಳ್ಳಿಗಳಿಗೆ ನಿರಂತರವಾಗಿ ಭೇಟಿ ನೀಡಿದ ಅಧಿಕಾರಿಗಳು ಫೋನ್‌ಗಳ ಸೀರಿಯಲ್ ನಂಬರ್‌ಗಳನ್ನು ದಾಖಲಿಸಿಕೊಂಡರು ಹಾಗೂ ಜನರು ನಡೆಯುವಾಗ ಅವರ ಫೋನ್‌ಗಳ ಮೇಲೆ ನಿಗಾ ಇಡಲು ಬೀದಿಗಳಲ್ಲಿ ಸಲಕರಣೆಗಳನ್ನು ಅಳವಡಿಸಿದರು.

ಈ ಸಂದರ್ಭದಲ್ಲಿ ಎರಡು ಫೋನ್‌ಗಳನ್ನು ಹೊಂದಿದ, ಹಳೆಯ ಫೋನ್‌ಗಳನ್ನು ಹೊಂದಿದ ಅಥವಾ ಫೋನ್‌ಗಳನ್ನೇ ಹೊಂದಿರದ ಉಯಿಘರ್‌ಗಳನ್ನು ಬಂಧನ ಕೇಂದ್ರಗಳಿಗೆ ತಳ್ಳಲಾಯಿತು ಎನ್ನುವುದನ್ನು ಸರಕಾರದ ದಾಖಲೆಗಳೇ ಹೇಳುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X