ಕೋವಿಡ್-19 ಮೃತದೇಹದ ಅಂತ್ಯಸಂಸ್ಕಾರದ ಕುರಿತು ಪ್ರಾತ್ಯಕ್ಷಿಕೆ
ಉಡುಪಿ, ಜು.3: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ ಕೋವಿಡ್-19 ಮೃತದೇಹದ ಅಂತ್ಯಸಂಸ್ಕಾರದ ಕುರಿತು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರವನ್ನು ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ಜು.2ರಂದು ಜರಗಿತು.
ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಪ್ರೇಮಾನಂದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯ ಕರ್ತರ ನಾಲ್ಕು ತಂಡವನ್ನು ರಚಿಸಲಾಯಿತು. ಮೆಡಿಕಲ್ನ ಜಿಲ್ಲಾ ಉಸ್ತುವಾರಿ ಮುನೀರ್ ಕಲ್ಮಾಡಿ, ಮಂಗಳೂರಿನ ಉಸ್ತುವಾರಿ ಇಲ್ಯಾಸ್ ಬಜ್ಪೆ, ಸಾದಿಕ್ ಹಬು ಹಾಜಿ, ಹಬೀಬ್ ಮಂಗಳೂರು ಉಪಸ್ಥಿತರಿದ್ದರು.
Next Story