ಕೋವಿಡ್-19 ಸೋಂಕಿನಿಂದ ನಿರ್ಮಾಪಕ ಮೃತ್ಯು
ಬೆಂಗಳೂರು, ಜು.4: ಕೋವಿಡ್-19 ಸೋಂಕಿನಿಂದಾಗಿ ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
'ಗ್ರಾಮಾಯಣ' ಸಿನಿಮಾದ ಎನ್.ಎಲ್.ಎನ್. ಮೂರ್ತಿ ನಿಧನರಾಗಿದ್ದು, ಎರಡು ದಿನದ ಹಿಂದಷ್ಟೇ ಇವರ ತಾಯಿ ಸಹ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಇವರು ಎರಡು ದಿನಗಳ ಹಿಂದೆ ಕಡಿಮೆ ರಕ್ತದೊತ್ತಡದಿಂದಾಗಿ ಬಿಜಿಎಸ್ ಆಸ್ಪತ್ರೆಗೆ ಮೂರ್ತಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಸರಕಾರದ ಅದೇಶದ ಅನ್ವಯ, ಪಾರ್ಥೀವ ಶರೀರವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
Next Story