ವಿಕಾಸ್ ದುಬೆ ಬಂಧಿಸಿದವರಿಗೆ 2.5 ಲಕ್ಷ ರೂ.ಬಹುಮಾನ
![ವಿಕಾಸ್ ದುಬೆ ಬಂಧಿಸಿದವರಿಗೆ 2.5 ಲಕ್ಷ ರೂ.ಬಹುಮಾನ ವಿಕಾಸ್ ದುಬೆ ಬಂಧಿಸಿದವರಿಗೆ 2.5 ಲಕ್ಷ ರೂ.ಬಹುಮಾನ](https://www.varthabharati.in/sites/default/files/images/articles/2020/07/6/249882-1594029841.jpg)
ಲಕ್ನೊ, ಜು.7: ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿರುವ ಕುಖ್ಯಾತ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಿದವರಿಗೆ ಬಹುಮಾನ ಮೊತ್ತವನ್ನು 2.50 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ವಿಕಾಸ್ ದುಬೆಯನ್ನು ಬಂಧಿಸಿದವರಿಗೆ ಬಹುಮಾನ ಮೊತ್ತವನ್ನು ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಎಚ್.ಸಿ.ಅವಸ್ಥಿ ಅವರು 2.50 ಲಕ್ಷ ರೂ.ಗೆ ಏರಿಕೆ ಮಾಡಿದ್ದಾರೆ''ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಪ್ರಶಾಂತ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಗ್ಯಾಂಗ್ಸ್ಟರ್ ದುಬೆ ಬಂಧಿಸಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಕಾನ್ಪುರ ವಲಯದ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ರವಿವಾರ ಹೇಳಿಕೆ ನೀಡಿದ್ದರು.
Next Story