ದಿನಪೂರ್ತಿ ಕೆಲಸ ಮಾಡಲು ಸಾಧ್ಯವಿಲ್ಲ: ಪೌರಕಾರ್ಮಿಕರ ಅಳಲು
ಬೆಂಗಳೂರು, ಜು.6: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ದಿನಪೂರ್ತಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ.
ಸೋಮವಾರ ಈ ಕುರಿತು ಮಾತನಾಡಿದ ಕೋರಮಂಗಲ ವ್ಯಾಪ್ತಿಯ ಪೌರ ಕಾರ್ಮಿಕರಾದ ಮಂಜುಳಾ, ಕೊರೋನ ಹಿನ್ನೆಲೆ ನಮ್ಮಲ್ಲೂ ಭಯ ಉಂಟಾಗಿದ್ದು, ದಿನಪೂರ್ತಿ ಕೆಲಸ ಸಾಧ್ಯವಿಲ್ಲ. ಬದಲಾಗಿ, ಅರ್ಧ ದಿನ ಕೆಲಸ ಕಾರ್ಯನಿರ್ವಹಿಸುವಂತೆ ಸೂಚಿಸಬೇಕೆಂದು ಮನವಿ ಮಾಡಿದರು.
ಬೀದಿ ಬದಿ ಹಾಗೂ ಮನೆಗಳ ಬಳಿ ಸ್ವಚ್ಛತೆ ಕಾರ್ಯಕ್ಕೆ ಹೋಗುವಾಗ ಅಲ್ಲಿನ ಮನೆ ಮಾಲಕರು ನಮ್ಮೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಈ ಸಂಬಂಧ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
Next Story