ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು
ಉಡುಪಿ, ಜು.7: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡಿದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದಿಂದ ಜಿಲ್ಲೆಗೆ ಬಂದಿರುವ ಕೊಡಂಕೂರು ನಿವಾಸಿ ವಿನಯ ಕುಮಾರ್(28)ನನ್ನು ಜು.1ರಿಂದ ಜು.14ರವರೆಗೆ ಕಡ್ಡಾಯವಾಗಿ ಹೋಮ್ ಕ್ವಾರಂಟೇನ್ನಲ್ಲಿ ಇರಿಸಲಾಗಿತ್ತು. ಆದರೆ ಇದನ್ನು ಉಲ್ಲಂಘಿಸಿರುವ ವಿನಯ ಕುಮಾರ್ ಜು.6ರಂದು ಕಾರ್ಕಳಕ್ಕೆ ತೆರಳಿದ್ದಾರೆ ಎಂದು ದೂರಲಾಗಿದೆ.
ರೋಗದ ಬಗ್ಗೆ ನಿರ್ಲಕ್ಷ ವಹಿಸಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ಬೇಜವಾಬ್ದಾರಿ ವರ್ತನೆ ತೋರಿರುವ ವಿನಯ ಕುಮಾರ್ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಉಡುಪಿ ನಗರಸಭೆ ಫ್ಲೈಯಿಂಗ್ ಸ್ಕಾಡ್ನವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
Next Story