ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ನಿಂದ ಪ್ರಬಂಧ ಸ್ಪರ್ಧೆ
ಉಡುಪಿ, ಜು.7: ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್, ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಕೊರೋನ ಲಾಕ್ಡೌನ್- ಕಹಿ ಸಿಹಿ ನೆನಪುಗಳು’ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಪ್ರಬಂಧ ಪುಲ್ಸ್ನೇಲ್ ಕಾಗದದಲ್ಲಿ ಕನಿಷ್ಠ ನಾಲ್ಕರಿಂದ ಎಂಟು ಪುಟಗಳ ಮಿತಿಯಲ್ಲಿರಬೇಕು. ಪ್ರಬಂಧವನ್ನು ಕೈಬರಹ ಅಥವಾ ಡಿಟಿಪಿ ಮಾಡಿ ಅಂಚೆ ಮೂಲಕ ಕಳುಹಿಸಬೇಕು. ಪ್ರಬಂಧಗಳು ಜು.21ರೊಳಗೆ ಟ್ರಸ್ಟ್ ವಿಳಾಸಕ್ಕೆ ತಲುಪಬೇಕು. ವಿಜೇತರಿಗೆ ಪ್ರಥಮ ಬಹುಮಾನ 1,500ರೂ. ಹಾಗೂ ದ್ವಿತೀಯ ಬಹುಮಾನ 1,000ರೂ.
ಪ್ರಬಂಧ ಕಳುಹಿಸಬೇಕಾದ ವಿಳಾಸ: ಪ್ರೊ.ಮುರಳೀಧರ ಉಪಾಧ್ಯ, ಸಂಸ್ಕೃತಿ ಸಿರಿ ಟ್ರಸ್ಟ್, ಕೇರಾಫ್ ಸಖೀಗೀತ, ಎಂಐಜಿ-1, ದೊಡ್ಡನಗುಡ್ಡೆ, ಉಡುಪಿ- 576102. ಮೊಬೈಲ್ ವಾಟ್ಸಪ್:9448215779.
Next Story