ಮೂಡುಬಿದಿರೆ ಎಸಿಎಫ್ ಆಗಿ ಡಾ.ಪ್ರಶಾಂತ್ ಅಧಿಕಾರ ಸ್ವೀಕಾರ
ಮೂಡುಬಿದಿರೆ: ಕಾರ್ಕಳ, ವೇಣೂರು,ಹೆಬ್ರಿ ಸೇರಿದಂತೆ ಮೂಡುಬಿದಿರೆ ವಲಯ ಅರಣ್ಯ ವ್ಯಾಪ್ತಿಯ ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಡಾ. ಪ್ರಶಾಂತ್ ಪಿ.ಕೆ.ಎಂ. ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಖಾನಾಪುರ, ಯಲ್ಲಾಪುರ ಉಪವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಅವರು ವಯೋ ನಿವೃತ್ತಿ ಹೊಂದಿದ ಎಸಿಎಫ್ ಎಂ.ಎಂ ಅಚ್ಚಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
Next Story