Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿಕ್ಕಟ್ಟಿನ ಕಾಲದಲ್ಲಿ ಬೇಕು ಸಂಪೂರ್ಣ...

ಬಿಕ್ಕಟ್ಟಿನ ಕಾಲದಲ್ಲಿ ಬೇಕು ಸಂಪೂರ್ಣ ಪಾರದರ್ಶಕತೆ

ಅಂಜಲಿ ಭಾರದ್ವಾಜ್ಅಂಜಲಿ ಭಾರದ್ವಾಜ್9 July 2020 10:57 PM IST
share
ಬಿಕ್ಕಟ್ಟಿನ ಕಾಲದಲ್ಲಿ ಬೇಕು ಸಂಪೂರ್ಣ ಪಾರದರ್ಶಕತೆ

2005ರ ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಸರಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಮತ್ತು ಅವರನ್ನು ಉತ್ತರದಾಯಿಗಳನ್ನಾಗಿ ಮಾಡುವ ಅಧಿಕಾರ ನೀಡುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಈ ಕಾಯ್ದೆಯ ಅನುಷ್ಠಾನ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಹತ್ವ ಪಡೆದಿದೆ. ಸರಕಾರಗಳು ಘೋಷಿಸಿರುವ ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ಜನರಿಗೆ ವ್ಯಾಪಕವಾಗಿ ತಿಳಿಯುವುದು ಅತ್ಯಂತ ಅವಶ್ಯಕ.


ಪಿಎಂ ಕೇರ್ಸ್‌ ನಿಧಿಗೆ ಸಂಬಂಧಿಸಿ ಸಲ್ಲಿಸಲಾಗಿರುವ ಮಾಹಿತಿ ಹಕ್ಕು ಅರ್ಜಿಗಳು ಉತ್ತರ ಸಿಗದೆ ಬಿದ್ದುಕೊಂಡಿವೆ. ಈ ನಿಧಿಗೆ ಸಂಬಂಧಿಸಿ ಸಂಗ್ರಹವಾದ ಮೊತ್ತ, ದಾನಿಗಳ ಹೆಸರುಗಳು, ನಿಧಿಯ ಮೊತ್ತದಿಂದ ಇದುವರೆಗೆ ಮಾಡಲಾಗಿರುವ ಖರ್ಚು ಅಥವಾ ಫಲಾನುಭವಿಗಳ ವಿವರಗಳ ಕುರಿತು ಯಾವುದೇ ಮಾಹಿತಿ ಇಲ್ಲ. ವರದಿಗಳ ಪ್ರಕಾರ ವಿದೇಶಿ ಮೂಲಗಳಿಂದಲೂ ಸೇರಿದಂತೆ ಈ ನಿಧಿಗೆ ಒಂದು ಮಿಲಿಯ ಡಾಲರ್‌ಗಿಂತಲೂ ಹೆಚ್ಚು ದೇಣಿಗೆಗಳು ಬಂದಿವೆ.

ರಾಷ್ಟ್ರವನ್ನು ಹಿಂದೆಂದೂ ಕಾಡಿರದ ಬಿಕ್ಕಟ್ಟು (ಕೊರೋನ ಸಾಂಕ್ರಾಮಿಕ) ಕಾಡುತ್ತಿರುವಾಗ ಜನರ ಮಾಹಿತಿ ಹಕ್ಕಿನ ಉಲ್ಲಂಘನೆ ಆತಂಕಕಾರಿ ವಿಷಯ. ಲಾಕ್‌ಡೌನ್ ಅವಧಿಯಲ್ಲಿ ದಿಢೀರನೆ ತಮ್ಮ ಆದಾಯಗಳಿಗೆ ಅವಕಾಶಗಳನ್ನು ಕಳೆದುಕೊಂಡ ಮಿಲಿಯಗಟ್ಟಲೆ ಜನರ ಜೀವನಾಡಿ, ಸಾರ್ವಜನಿಕರ ಹಣದಿಂದ ಸಾಧ್ಯವಾಗುವ ಪರಿಹಾರ ಹಾಗೂ ಕಲ್ಯಾಣ ಕಾರ್ಯಕ್ರಮಗಳು. ಸಾರ್ವಜನಿಕರ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ಬಡವರಿಗೆ, ಸಂತ್ರಸ್ತರಿಗೆ ಸರಕಾರಿ ಯೋಜನೆಗಳ ಲಾಭ ದೊರಕುತ್ತದೆಂಬ ಭರವಸೆ ಇರಬೇಕಾದರೆ ಅವರಿಗೆ ಸಂಬಂಧಿಸಿದ ಮಾಹಿತಿ ಪಡೆಯುವ ಅವಕಾಶವಿರಬೇಕು.

ವ್ಯಂಗ್ಯವೆಂದರೆ ಈ ಮಾಹಿತಿ ದೊರಕುವುದಕ್ಕೆ ಬದಲಾಗಿ, ಸರಕಾರದ ನಡೆಗಳ ಬಗ್ಗೆ, ಬಿಕ್ಕಟ್ಟಿನ ವೇಳೆ ಸರಕಾರದ ಕ್ರಮಗಳ ಬಗ್ಗೆ ಸಾರ್ವಜನಿಕ ಪರಿಶೀಲನೆ ಕಣ್ಗಾವಲು ಅನಪೇಕ್ಷಣೀಯ ಮತ್ತು ನಾಗರಿಕರು ಸರಕಾರ ಹೇಳುವುದನ್ನು ಯಾವುದೇ ಪ್ರಶ್ನೆ ಕೇಳದೆ ಸುಮ್ಮನೆ ಒಪ್ಪಿಕೊಳ್ಳಬೇಕು ಎನ್ನುವ ಒಂದು ಕಥಾನಕ ಮುನ್ನೆಲೆಗೆ ಬರುವಂತೆ ಕಾಣಿಸುತ್ತಿದೆ.

2005ರ ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಸರಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಮತ್ತು ಅವರನ್ನು ಉತ್ತರದಾಯಿಗಳನ್ನಾಗಿ ಮಾಡುವ ಅಧಿಕಾರ ನೀಡುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಈ ಕಾಯ್ದೆಯ ಅನುಷ್ಠಾನ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಹತ್ವ ಪಡೆದಿದೆ. ಸರಕಾರಗಳು ಘೋಷಿಸಿರುವ ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ಜನರಿಗೆ ವ್ಯಾಪಕವಾಗಿ ತಿಳಿಯುವುದು ಅತ್ಯಂತ ಅವಶ್ಯಕ. ಉದಾಹರಣೆಗೆ ಅಗತ್ಯವುಳ್ಳವರಿಗೆ ಆಹಾರ ಭದ್ರತೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಬ್ಸಿಡಿ ದರದಲ್ಲಿ ಆಹಾರ ಪೂರೈಕೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿವೆ. ಆಹಾರ ಸಾಮಗ್ರಿಗಳು ಹಾಗೂ ಅವಶ್ಯಕ ವಸ್ತುಗಳು ಪರಿಣಾಮಕಾರಿಯಾಗಿ ಪೂರೈಕೆಯಾಗಬೇಕಾದರೆ ಇವುಗಳ ಪ್ರಮಾಣ ಮತ್ತು ಬೆಲೆ, ಫಲಾನುಭವಿಗಳ ವಿವರಗಳು ಮತ್ತು ಲಭ್ಯವಿರುವ ದಾಸ್ತಾನು ಸಹಿತ ಪಡಿತರ ಅಂಗಡಿಗಳ ಯಾದಿಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕ ಜಾಲತಾಣಗಳಲ್ಲಿ ಲಭ್ಯವಾಗಲೇಬೇಕು.

ದೋಷಪೂರಿತ ಕೊರೋನ ಪರೀಕ್ಷೆಯ ಕಿಟ್‌ಗಳು ಹಾಗೂ ಖೋಟಾ ವೆಂಟಿಲೇಟರ್‌ಗಳಿಗೆ ಸಂಬಂಧಿಸಿ ಎದ್ದ ವಿವಾದಗಳಂತಹ ವಿವಾದಗಳನ್ನು ಮಾಹಿತಿಯ ಇನ್ನಷ್ಟು ಪಾರದರ್ಶಕತೆಯಿಂದ ತಡೆಯಬಹುದು. ಹಲವು ರಾಜ್ಯಗಳು ಚೀನಾದಿಂದ ಆಮದು ಮಾಡಲ್ಪಟ್ಟ ಕೋವಿಡ್-19 ಪರೀಕ್ಷಾ ಕಿಟ್‌ಗಳ ಬಗ್ಗೆ ದೂರು ನೀಡಿದ ಬಳಿಕ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಅವುಗಳ ಬಳಕೆಯನ್ನು ತಡೆಹಿಡಿಯಿತು. ಆಗ ಚೀನಾದಿಂದ ಆ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲು ಸರಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿದವು. ಸೋಂಕು ಪೀಡಿತ ರೋಗಿಗಳು ತುರ್ತುನಿಗಾ ಘಟಕದ ಚಿಕಿತ್ಸೆಗಾಗಿ ಹೋದಾಗ ಅವರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲೆದಾಡಿಸಿದ ಹಲವಾರು ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳು ತಮ್ಮಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ಇತರ ಸೌಕರ್ಯಗಳ ಕುರಿತು ಸಾರ್ವಜನಿಕವಾಗಿ ನಿಜವಾದ ಮಾಹಿತಿ ಲಭಿಸುವಂತೆ ಮಾಡಿದ್ದರೆ ಇಂತಹ ಅಲೆದಾಟ, ಪರದಾಟಗಳನ್ನು ತಪ್ಪಿಸಬಹುದಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಮಾಹಿತಿ ಆಯೋಗಗಳ ಪಾತ್ರ ಅತಿ ಮುಖ್ಯ. ಸಾಂಕ್ರಾಮಿಕ ರೋಗದ ಭೀತಿಯ ಕಾಲದಲ್ಲಿ ಮಾಹಿತಿಗಾಗಿ ನಾಗರಿಕರು ಸಲ್ಲಿಸುವ ವಿನಂತಿಯನ್ನು ಪರಿಶೀಲಿಸಿ ಸೂಕ್ತ ಮಾಹಿತಿ ನೀಡುವಲ್ಲಿ ವಿಳಂಬವಾಗುವುದು ಅನಿವಾರ್ಯವಿರಬಹುದು. ಆದರೆ ಆರ್‌ಟಿಐ ಕಾಯ್ದೆಯಂತೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸದಿರಲು ಕೊರೋನ ಬಿಕ್ಕಟ್ಟು ಒಂದು ನೆಪವಾಗದಂತೆ ನೋಡಿಕೊಳ್ಳಬೇಕಾಗಿದೆ.

ಗೌಪ್ಯ ಕಾಪಾಡುವ ಹಾಗೂ ಬೇಕಾಬಿಟ್ಟಿ ಕ್ರಮ ತೆಗೆದುಕೊಳ್ಳುವ ಒಂದು ಕಾಲವಿದು. ಇಂತಹ ಸಮಯದಲ್ಲಿ ಸರಕಾರ ಜನರ ಜೀವನ ಹಾಗೂ ಹೊಟ್ಟೆ ಪಾಡಿನ ಮೇಲೆ ಭಾರೀ ಪರಿಣಾಮಗಳನ್ನು ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇಂತಹ ನಿರ್ಧಾರಗಳಲ್ಲಿ ಜನರು ಅರ್ಥಪೂರ್ಣವಾಗಿ ಭಾಗವಹಿಸುವಂತೆ ಆಗಬೇಕು. ಇಂತಹ ಭಾಗವಹಿಸುವಿಕೆ ಅವರಿಗೆ ಸಾಧ್ಯವಾಗಬೇಕಾದರೆ ಮಾಹಿತಿಗೆ ಸಂಬಂಧಿಸಿ ಮುಕ್ತ ವಾತಾವರಣದ ಒಂದು ಸಂಸ್ಕೃತಿಯ ನಿರ್ಮಾಣ ಬಹಳ ಮುಖ್ಯ. ಸಾಂಕ್ರಾಮಿಕದ ವಿರುದ್ಧದ ಸಮರದಲ್ಲಿ ತಮ್ಮ ಹಣ ಎಲ್ಲಿ ಮತ್ತು ಹೇಗೆ ಖರ್ಚಾಗುತ್ತಿದೆ ಎಂಬ ಮಾಹಿತಿ ಜನರಿಗೆ ಸಿಗಲೇಬೇಕು.

ಕೃಪೆ: ದಿ ಹಿಂದು 

share
ಅಂಜಲಿ ಭಾರದ್ವಾಜ್
ಅಂಜಲಿ ಭಾರದ್ವಾಜ್
Next Story
X