ಕೋವಿಡ್19: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ದ.ಕ. ಡಿಸಿಗೆ ಮನಪಾ ಸದಸ್ಯರ ಮನವಿ
ಮಂಗಳೂರು, ಜು.13: ಮಂಗಳೂರು ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನವನ್ನು ತಡೆಗಟ್ಟಲು ಲಾಕ್ ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಚಿಕಿತ್ಸೆ ನೀಡಲು ವಿಧಿಸುವ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಸರಕಾರ ಮಾಡಿರುವ ಮಾರ್ಗಸೂಚಿಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಮತ್ತು ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ ಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮೆಡಿಕಲ್ ಕಾಲೇಜ್ ಆಸ್ಪತೆಗಳ ಮೂಲಕ ಎಲ್ಲರಿಗೂ ಬಿಪಿಎಲ್ ಮತ್ತು ಎಪಿಎಲ್ ಎಂಬ ಭೇದವಿಲ್ಲದೆ ಕೇವಲ ತನ್ನ ಗುರುತು ಚೀಟಿ ಆಧಾರ್ ಕಾರ್ಡ್ ತೋರಿಸಿದ ಕೂಡಲೇ ಉಚಿತವಾಗಿ ಕೊರೋನಗೆ ಚಿಕಿತ್ಸೆ ನೀಡಬೇಕು. ಸಮುದಾಯ ಆಸ್ಪತೆಗಳ ಮೂಲಕ ಉಚಿತ ಕೊರೋನ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಕಾರ್ಪೋರೇಟರ್ ಗಳಾದ ಭಾಸ್ಕರ್, ಜಸಿಂತಾ ನವೀನ್ ಡಿಸೋಜ, ಕೇಶವ ಮರೋಲಿ, ವಿನಯರಾಜ್, ಸಂಶುದ್ದೀನ್, ಪ್ರವೀಣ್ ಆಳ್ವ, ಅಶ್ರಫ್, ಅನಿಲ್ ಕುಮಾರ್, ಝೀನತ್ ಹಾಜರಿದ್ದರು.