Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅವಧಿ ಮುಗಿದ ವೀಸಾಗಳನ್ನು ಆನ್ಲೈನ್ ಮೂಲಕ...

ಅವಧಿ ಮುಗಿದ ವೀಸಾಗಳನ್ನು ಆನ್ಲೈನ್ ಮೂಲಕ ನವೀಕರಿಸಿ: ಪ್ರಜೆಗಳು, ವಲಸಿಗರಿಗೆ ಯುಎಇ ಸೂಚನೆ

ವಾರ್ತಾಭಾರತಿವಾರ್ತಾಭಾರತಿ13 July 2020 9:14 PM IST
share
ಅವಧಿ ಮುಗಿದ ವೀಸಾಗಳನ್ನು ಆನ್ಲೈನ್ ಮೂಲಕ ನವೀಕರಿಸಿ: ಪ್ರಜೆಗಳು, ವಲಸಿಗರಿಗೆ ಯುಎಇ ಸೂಚನೆ

ಅಬುಧಾಬಿ (ಯುಎಇ), ಜು. 13: ಯುಎಇಯ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆ್ಯಂಡ್ ಸಿಟಿಝನ್ಶಿಪ್ ರವಿವಾರ ವಾಸ್ತವ್ಯ ನವೀಕರಣ ಅರ್ಜಿಗಳ ಸ್ವೀಕಾರವನ್ನು ಆರಂಭಿಸಿದೆ. ವೀಸಾ ಮತ್ತು ಎಮಿರೇಟ್ಸ್ ಗುರುತು ಚೀಟಿಗಳ ಅವಧಿ ಮುಗಿದಿರುವ ಯುಎಇ ನಿವಾಸಿಗಳು ಮತ್ತು ನಾಗರಿಕರು ಅವುಗಳ ನವೀಕರಣಕ್ಕಾಗಿ ಆನ್ಲೈನ್ ಮತ್ತು ಪ್ರಾಧಿಕಾರದ ಸ್ಮಾರ್ಟ್ ಚಾನೆಲ್ ಗಳ ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಾಧಿಕಾರವು ಒತ್ತಾಯಿಸಿದೆ.

ಕೋವಿಡ್-19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ನವೀಕರಣ ಕೇಂದ್ರಗಳಲ್ಲಿ ಜನಸಂದಣಿಯನ್ನು ನಿವಾರಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ನವೀಕರಣಕ್ಕಾಗಿ ನೀಡಲಾಗಿರುವ ರಿಯಾಯಿತಿ ಅವಧಿಯನ್ನು ಗಮನಿಸುವಂತೆಯೂ ಪ್ರಾಧಿಕಾರವು ಯುಎಇ ನಿವಾಸಿಗಳು (ವಲಸಿಗರು) ಮತ್ತು ನಾಗರಿಕರನ್ನು ಒತ್ತಾಯಿಸಿದೆ. ‘‘ದಾಖಲೆಗಳನ್ನು ನವೀಕರಿಸಲು ಯುಎಇ ಪ್ರಜೆಗಳು, ಜಿಸಿಸಿ (ಕೊಲ್ಲಿ ಸಹಕಾರ ಮಂಡಳಿಗೆ ಒಳಪಟ್ಟ ದೇಶಗಳ) ಪ್ರಜೆಗಳು ಮತ್ತು ಯುಎಇಯಲ್ಲೇ ಇರುವ ವಲಸಿಗರಿಗೆ ಮೂರು ತಿಂಗಳ ರಿಯಾಯಿತಿ ಅವಧಿಯನ್ನು ನೀಡಲಾಗಿದೆ’’ ಎಂದು ಸ್ಥಳೀಯ ಟೆಲಿವಿಶನ್ ಚಾನೆಲೊಂದಕ್ಕೆ ರವಿವಾರ ನೀಡಿದ ಸಂದರ್ಶನದಲ್ಲಿ ಪ್ರಾಧಿಕಾರದ ಅಧಿಕೃತ ವಕ್ತಾರ ಬ್ರಿಗೇಡಿಯರ್ ಖಾಮಿಸ್ ಮುಹಮ್ಮದ್ ಅಲ್ ಕಾಬಿ ಹೇಳಿದರು.

ಕೊರೋನ ವೈರಸ್ ಲಾಕ್ಡೌನ್ ಅವಧಿಯಲ್ಲಿ ತೆಗೆದುಕೊಳ್ಳಲಾದ ಹಲವಾರು ನಿರ್ಧಾರಗಳಿಗೆ ಯುಎಇ ಸಚಿವ ಸಂಪುಟವು ಶುಕ್ರವಾರ ತಿದ್ದುಪಡಿಗಳನ್ನು ಮಾಡಿತ್ತು.

ವೀಸಾ ಮತ್ತು ಗುರುತು ಚೀಟಿಗಳ ಅವಧಿಯು ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ಮುಗಿದಿರುವವರಿಗಾಗಿ ನವೀಕರಣ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಬ್ರಿಗೇಡಿಯರ್ ಅಲ್ ಕಾಬಿ ತಿಳಿಸಿದರು.

ವಾಸ್ತವ್ಯ ಪರ್ಮಿಟ್ ಗಳ ಅವಧಿಯು ಮೇ ತಿಂಗಳಲ್ಲಿ ಮುಗಿದಿರುವವರ ನವೀಕರಣ ಅರ್ಜಿಗಳನ್ನು ಆಗಸ್ಟ್ 11ರಿಂದ ಸ್ವೀಕರಿಸಲಾಗುವುದು ಹಾಗೂ ಜೂನ್ 1 ಮತ್ತು ಜುಲೈ 12ರ ನಡುವಿನ ಅವಧಿಯಲ್ಲಿ ವೀಸಾ ಅವಧಿ ಮುಗಿದಿರುವವರು ಸೆಪ್ಟಂಬರ್ 10ರಿಂದ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.

ಜುಲೈ 12ರ ಬಳಿಕ ವಾಸ್ತವ್ಯ ವೀಸಾ ಮತ್ತು ಗುರುತುಚೀಟಿಗಳ ಅವಧಿ ಮುಕ್ತಾಯಗೊಂಡಿರುವವರ ನವೀಕರಣ ಅವಧಿಯನ್ನು ನಿರ್ದಿಷ್ಟ ದಿನಾಂಕಕ್ಕೆ ಸೀಮಿತಗೊಳಿಸಲಾಗಿಲ್ಲ ಎಂದು ಅವರು ಹೇಳಿದರು.

ಆರು ತಿಂಗಳಿಗೂ ಹೆಚ್ಚು ಕಾಲ ಯುಎಇಯಿಂದ ಹೊರಗಿರುವ ಯುಎಇ ನಾಗರಿಕರು, ಜಿಸಿಸಿ ಪ್ರಜೆಗಳು ಮತ್ತು ವಲಸಿಗರಿಗೆ ತಮ್ಮ ದಾಖಲೆಗಳನ್ನು ನವೀಕರಿಸಲು ಅವರು ದೇಶಕ್ಕೆ ಆಗಮಿಸಿದಂದಿನಿಂದ ಒಂದು ತಿಂಗಳ ರಿಯಾಯಿತಿ ಅವಧಿಯನ್ನು ನೀಡಲಾಗುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X