Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಫ್ರಾನ್ಸ್ ನೀರ್ಗಲ್ಲ ನದಿಯಲ್ಲಿ 1966ರ...

ಫ್ರಾನ್ಸ್ ನೀರ್ಗಲ್ಲ ನದಿಯಲ್ಲಿ 1966ರ ಭಾರತೀಯ ಪತ್ರಿಕೆಗಳು ಪತ್ತೆ!

ಪತ್ರಿಕೆಗಳಲ್ಲಿದ್ದ ಪ್ರಮುಖ ಸುದ್ದಿ ಯಾವುದು ಗೊತ್ತಾ?

ವಾರ್ತಾಭಾರತಿವಾರ್ತಾಭಾರತಿ14 July 2020 8:39 PM IST
share
ಫ್ರಾನ್ಸ್ ನೀರ್ಗಲ್ಲ ನದಿಯಲ್ಲಿ 1966ರ ಭಾರತೀಯ ಪತ್ರಿಕೆಗಳು ಪತ್ತೆ!

ಲಂಡನ್, ಜು. 14: ಏರ್ ಇಂಡಿಯಾ ವಿಮಾನವೊಂದು 54 ವರ್ಷಗಳ ಹಿಂದೆ ಪತನಗೊಂಡ ಪಶ್ಚಿಮ ಯುರೋಪ್ ನ ಮೋಂಟ್ ಬ್ಲಾಕ್ ಪರ್ವತ ಶ್ರೇಣಿಯಲ್ಲಿರುವ ಫ್ರಾನ್ಸ್ ಗೆ ಸೇರಿದ ಬೋಸನ್ಸ್ ಎಂಬ ಕರಗುತ್ತಿರುವ ನೀರ್ಗಲ್ಲ ನದಿಯಲ್ಲಿ ಭಾರತೀಯ ಪತ್ರಿಕೆಗಳು ಪತ್ತೆಯಾಗಿವೆ.

ಇಂಥ ಒಂದು ಪತ್ರಿಕೆಯು ‘‘ಭಾರತದ ಪ್ರಥಮ ಮಹಿಳಾ ಪ್ರಧಾನಿ’’ ಎಂಬ ಶೀರ್ಷಿಕೆಯಲ್ಲಿ 1966ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಜಯಗಳಿಸಿದ ಸುದ್ದಿಯನ್ನು ಹೊಂದಿದೆ.

ಈ ಪತ್ರಿಕೆಗಳು 1966 ಜನವರಿ 24ರಂದು ಯುರೋಪ್ ನ ಅತ್ಯುನ್ನತ ಪರ್ವತ ಶ್ರೇಣಿಗೆ ಅಪ್ಪಳಿಸಿದ ಏರ್ ಇಂಡಿಯಾ ವಿಮಾನದ ಅವಶೇಷಗಳಾಗಿವೆ. ಫ್ರಾನ್ಸ್ ನ ಚಾಮೊನಿಕ್ಸ್ ರಿಸಾರ್ಟ್ಗಿಂತ 1,350 ಮೀಟರ್ ಎತ್ತರದಲ್ಲಿ ಕೆಫೆ ರೆಸ್ಟೋರೆಂಟೊಂದನ್ನು ನಡೆಸುತ್ತಿರುವ ತಿಮೋತೀ ಮೋಟಿನ್ ಎಂಬವರಿಗೆ ಈ ಪತ್ರಿಕೆಗಳು ಸಿಕ್ಕಿವೆ.

‘‘ಪತ್ರಿಕೆಗಳು ಈಗ ಒಣಗುತ್ತಿವೆ. ಆದರೂ ಅವುಗಳು ಉತ್ತಮ ಸ್ಥಿತಿಯಲ್ಲಿವೆ. ಅವುಗಳನ್ನು ಓದಬಹುದು’’ ಎಂದು 33 ವರ್ಷದ ಮೋಟಿನ್ ಸ್ಥಳೀಯ ಫ್ರೆಂಚ್ ದೈನಿಕ ‘ಲೆ ಡಾಪೈನ್ ಲೈಬರ್’ಗೆ ಹೇಳಿದ್ದಾರೆ ಎಂದು ಬ್ರಿಟನ್ ನ ‘ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

‘‘ಇದೇನೂ ಆಶ್ಚರ್ಯವಲ್ಲ. ನಾವು ಪ್ರತಿ ಸಲ ಆ ನೀರ್ಗಲ್ಲ ಮೇಲೆ ಸ್ನೇಹಿತರೊಂದಿಗೆ ನಡೆಯುತ್ತಿರುವಾಗಿ ಅಲ್ಲಿ ವಿಮಾನ ಪತನದ ಅವಶೇಷಗಳು ಸಿಗುತ್ತವೆ. ಅನುಭವದಿಂದ ಅವು ಎಲ್ಲಿವೆ ಎಂದು ಹೇಳಬಹುದಾಗಿದೆ. ಈಗ ಅಂಥ ಅವಶೇಷಗಳನ್ನು ಅವುಗಳ ಗಾತ್ರಗಳಿಗನುಸಾರವಾಗಿ ನೀರ್ಗಲ್ಲ ನದಿಯು ಒಯ್ಯುತ್ತಿದೆ’’ ಎಂದು ಅವರು ಹೇಳಿದರು.

ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಿಂದ ತಪ್ಪು ಸಂದೇಶಗಳು ಬಂದ ಬಳಿಕ, ಏರ್ ಇಂಡಿಯಾಕ್ಕೆ ಸೇರಿದ ಬೋಯಿಂಗ್ 707 ವಿಮಾನವು ಪರ್ವತಕ್ಕೆ ಢಿಕ್ಕಿ ಹೊಡೆದಿತ್ತು. ಅದರಲ್ಲಿದ್ದ ಎಲ್ಲ 177 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೋಟಿನ್ರಿಗೆ ಸಿಕ್ಕಿರುವ 10ಕ್ಕೂ ಅಧಿಕ ಪತ್ರಿಕೆಗಳ ಪೈಕಿ ‘ನ್ಯಾಶನಲ್ ಹೆರಾಲ್ಡ್’ ಮತ್ತು ‘ಎಕನಾಮಿಕ್ ಟೈಮ್ಸ್’ನ ಪ್ರತಿಗಳೂ ಇವೆ. ಐದು ದಶಕಗಳಿಗೂ ಅಧಿಕ ಕಾಲ ಪತ್ರಿಕೆಗಳನ್ನು ಆವರಿಸಿದ್ದ ಮಂಜುಗಡ್ಡೆಯು ಇತ್ತೀಚೆಗೆ ಕರಗಲು ಆರಂಭಿಸಿರುವುದರಿಂದ ಪತ್ರಿಕೆಗಳು ಹೊರಗೆ ಗೋಚರಿಸಿವೆ ಎನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X