ಬಂಧಿತ ಆರೋಪಿಗಳಿಗೆ ಕೊರೋನ ಪಾಸಿಟಿವ್: ಬಂದರು ಠಾಣೆ ಪೊಲೀಸರಲ್ಲಿ ಆತಂಕ
ಮಂಗಳೂರು, ಜು.17: ನಗರದ ಬಜಲಕೆರೆಯಲ್ಲಿ ಇತ್ತೀಚೆಗೆ ನಡೆದ ಘರ್ಷಣೆ ಪ್ರಕರಣದ ಆರು ಆರೋಪಿಗಳಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಅವರನ್ನು ಬಂಧಿಸಿದ್ದ ನಗರದ ಬಂದರು ಠಾಣೆ ಪೊಲೀಸರಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.
ಇತ್ತೀಚೆಗೆ ಬಜಲಕೆರೆಯಲ್ಲಿ ಇತ್ತಂಡಗಳ ನಡುವೆ ತಲವಾರ್ ಘರ್ಷಣೆ ನಡೆದಿತ್ತು. ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು. ಬಳಿಕ ಬಂದರು ಠಾಣೆಯ ಬಂದೀಖಾನೆಯಲ್ಲೇ ಎಲ್ಲರನ್ನೂ ಕೂಡಿ ಹಾಕಲಾಗಿತ್ತು. ಇದೀಗ ಆರು ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ.
ಆರೋಪಿಗಳನ್ನು ಬಂಧಿಸಿದ್ದ ಎಲ್ಲ ಪೊಲೀಸರಿಗೆ ಆತಂಕ ಶುರುವಾಗಿದೆ. ಈಗಾಗಲೇ ಹಲವು ಪೊಲೀಸರ ಗಂಟಲು ದ್ರವ ಮಾದರಿ ತೆಗೆದುಕೊಳ್ಳಲಾಗಿದೆ. ರಿಪೋರ್ಟ್ ಪಾಸಿಟಿವ್ ಬಂದರೆ ಠಾಣೆಯೆ ಸೀಲ್ಡೌನ್ ಆಗುವ ಸಾಧ್ಯತೆ ಇದೆ.
Next Story