ದೊಡ್ಡಾಣೆ ಗ್ರಾಮ:ಸಿಡಿಲು ಬಡಿದು ಯುವಕ ಮೃತ್ಯು
ಹನೂರು, ಜು19: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ದೊಡ್ಡಾಣೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಾಣೆ ಗ್ರಾಮದ ಮಹದೇವಸ್ವಾಮಿ(19) ಮೃತ ಯುವಕ.
ಇವರು ಗ್ರಾಮದ ಜಮೀನಿನೂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಭಾರೀ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ.
ಈ ಸಂಬಂಧ ಮೃತನ ಸಂಬಂಧಿಗಳು ಠಾಣೆಗೆ ಮಾಹಿತಿ ನೀಡಿದ್ದಾರೆ.
Next Story





