Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹಿಳೆಯ ಶಸ್ತ್ರ ಚಿಕಿತ್ಸೆಗೆ ಜನರಿಂದ 1.2...

ಮಹಿಳೆಯ ಶಸ್ತ್ರ ಚಿಕಿತ್ಸೆಗೆ ಜನರಿಂದ 1.2 ಕೋಟಿ ರೂ. ಸಂಗ್ರಹ : ಮೊದಲು ದಾಖಲೆ, ಮತ್ತೆ ಭಾರೀ ವಿವಾದ

ವಾರ್ತಾಭಾರತಿವಾರ್ತಾಭಾರತಿ19 July 2020 4:16 PM IST
share
ಮಹಿಳೆಯ ಶಸ್ತ್ರ ಚಿಕಿತ್ಸೆಗೆ ಜನರಿಂದ 1.2 ಕೋಟಿ ರೂ. ಸಂಗ್ರಹ : ಮೊದಲು ದಾಖಲೆ, ಮತ್ತೆ ಭಾರೀ ವಿವಾದ

ಕೊಚ್ಚಿ: ಅನಾರೋಗ್ಯದಿಂದಿದ್ದ ತನ್ನ ತಾಯಿಯ ಪಿತ್ತಜನಕಾಂಗದ ಕಸಿಗಾಗಿ ಕೇರಳದ ಕಣ್ಣೂರಿನ 22 ವರ್ಷದ ವರ್ಷಾ ತನಗೆ ಧನಸಹಾಯ ನೀಡುವಂತೆ ಮನವಿ ಮಾಡಿದ್ದರು. ವರ್ಷಾ ಅವರ ತಾಯಿ ರಾಧಾರನ್ನು ಅಮೃತಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸೆಗಾಗಿ 20 ಲಕ್ಷ ರೂ. ಬೇಕಾಗಿತ್ತು. ಯುವತಿಯ ಈ ಮನವಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 24  ಗಂಟೆಗಳಲ್ಲಿ 60 ಲಕ್ಷ ರೂ. ಸಂಗ್ರಹವಾಯಿತು. ಮರುದಿನ ಈ ಮೊತ್ತ ಕೋಟಿಯನ್ನು ದಾಟಿತು. ಕೊನೆಗೆ ಆಕೆಗೆ ಬಂದ ಒಟ್ಟು ಮೊತ್ತ 1 ಕೋಟಿ 21 ಲಕ್ಷ ರೂ. ಈ ವಿಚಾರ ಮಾಧ್ಯಮಗಳಲ್ಲೂ ವರದಿಯಾಯಿತು.

ಆದರೆ ಇದೇ ಸಂದರ್ಭ ಕೇರಳದಲ್ಲಿ ಈ ಮೊತ್ತಕ್ಕೆ ಸಂಬಂಧಿಸಿ ಭಾರೀ ವಿವಾದವೂ ಹುಟ್ಟಿಕೊಂಡಿತು. ದೌರ್ಜನ್ಯ , ವಂಚನೆ ಮತ್ತು ಹವಾಲಾ ಹಣದ ಆರೋಪಗಳು ಕೇಳಿ ಬಂತು. ಸಾಜನ್ ಕೇಚೇರಿ ಮತ್ತು ಫಿರೋಝ್ ಕುನ್ನಂಪರಂಬಿಲ್ ನೆರವಿನಿಂದ ವರ್ಷಾ ಈ ಮೊತ್ತವನ್ನು ಸಂಗ್ರಹಿಸಿದ್ದರು. ವಿಡಿಯೋ ಅಭಿಯಾನದ ಮೂಲಕ ವರ್ಷಾಗೆ ನೆರವಾಗಲು ಮುಂದೆ ಬಂದವರು ಸಾಜನ್ ಆಗಿದ್ದರೆ, ಈ ವಿಡಿಯೋವನ್ನು ಶೇರ್ ಮಾಡಿ ಭಾರೀ ಮೊತ್ತ ಸಂಗ್ರಹಕ್ಕೆ ಫಿರೋಝ್ ಕಾರಣರಾದರು.

ಈ ಇಬ್ಬರೂ ಸಾಮಾಜಿಕ ಕಾರ್ಯಕರ್ತರು ಹಲವಾರು ಜನರಿಗೆ ಸಹಾಯ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. ಹಣ ಸಂಗ್ರಹಿಸಿದ ಫಲಾನುಭವಿಗಳಿಗೆ ನೀಡಿ, ನಂತರ ಉಳಿದ ಹಣವನ್ನು ಸಂಕಷ್ಟದಲ್ಲಿರುವ ಇತರರಿಗೆ ಹಂಚುತ್ತೇವೆ ಎಂದು ಈ ಇಬ್ಬರು ಹೇಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ವರ್ಷಾ ಹೆಚ್ಚುವರಿ ಹಣವನ್ನು ಇತರ ರೋಗಿಗಳಿಗೆ ಸಹಾಯ ಮಾಡಲು ನೀಡುತ್ತಿಲ್ಲ ಎಂದು ಆರೋಪಿಸಿತು. ಈ ಬಗ್ಗೆ ವಿಡಿಯೋ ಮಾಡಿದ ಸಾಜನ್ , ವರ್ಷಾ ಹೆಚ್ಚವರಿ ಹಣವನ್ನು ಮರಳಿ ನೀಡುತ್ತಿಲ್ಲ. ಈ ಮೂಲಕ ಸಹಾಯ ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

“ತುರ್ತಾಗಿ ಪಿತ್ತಜನಕಾಂಗದ ಕಸಿ ಅಗತ್ಯವಾಗಿರುವ ಮತ್ತೊಬ್ಬ ರೋಗಿಯಿದ್ದಾರೆ. ವರ್ಷಾ ಸಹಾಯ ಕೇಳಿದಾಗ ನಾವು ಆ ರೋಗಿಗಾಗಿ ಹಣ ಸಂಗ್ರಹಕ್ಕೆ ಮುಂದಾಗಿದ್ದೆವು. ಅಭಿಯಾನಕ್ಕೆ ಮೊದಲು ವರ್ಷಾ ಜೊತೆ ಒಪ್ಪಂದ ಮಾಡಿಕೊಂಡೆವು. ಅದರ ಪ್ರಕಾರ ಹೆಚ್ಚುವರಿ ಹಣವನ್ನು ವರ್ಷಾ ನಮಗೆ ನೀಡಬೇಕಾಗಿತ್ತು. ಅದರ ಇತರ ರೋಗಿಗಳಿಗೆ ಸಹಾಯ ಮಾಡಲು ನೀಡಬೇಕಾಗಿತ್ತು” ಎಂದವರು ಹೇಳಿದರು.

ಇದರ ನಂತರ ವರ್ಷಾ ವಿಡಿಯೋವೊಂದನ್ನು ಮಾಡಿ ಗುಂಪೊಂದು ನನಗೆ ಆಗಾಗ ಕರೆ ಮಾಡುತ್ತಾ ಉಪಟಳ ನೀಡುತ್ತಿದೆ ಎಂದರು.

“ಇತರ ರೋಗಿಗಳಿಗೆ ಹಣ ನೀಡುವುದಿಲ್ಲ ಎಂದು ನಾನು ಹೇಳಿಲ್ಲ. ನನ್ನ ತಾಯಿ ಮತ್ತು ನಾನು ಇನ್ನಷ್ಟೇ ಚೇತರಿಸಿಕೊಳ್ಳುತ್ತಿದ್ದು, 3 ತಿಂಗಳು ಕಾಯುವಂತೆ ಮಾತ್ರ ಹೇಳಿದ್ದೆ (ವರ್ಷಾ ತಾಯಿಗೆ ತಮ್ಮ ಪಿತ್ತಜನಕಾಂಗದ ಭಾಗವೊಂದನ್ನು ದಾನ ನೀಡಿದ್ದಾರೆ). ನನ್ನ ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಾಣಿಸಿಕೊಂಡರೆ ನನಗೆ ಇನ್ನಷ್ಟು ಹಣ ಬೇಕಾಗಬಹುದು” ಎಂದು ವರ್ಷಾ ಹೇಳಿದ್ದಾರೆ. ಅಭಿಯಾನದ ಮೂಲಕ ಸಂಗ್ರಹವಾದ ಹಣದಿಂದ ತಾನು ಅಮೃತಾ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ತಾನು ನೆರವಾಗಿದ್ದೇನೆ ಎಂದೂ ಅವರು ಹೇಳಿದರು.

ಇದೀಗ ಈ ಪ್ರಕರಣ ಭಾರೀ ವಿವಾದ ಸೃಷ್ಟಿಸಿದ್ದು, ಕೆಲ ಗುಂಪುಗಳು ವರ್ಷಾಗೆ ಬೆಂಬಲ ನೀಡುತ್ತಿದ್ದರೆ ಮತ್ತೆ ಕೆಲವರು ಆಕೆಯನ್ನು ದುರಾಸೆ ತುಂಬಿದವಳು ಎಂದು ಆರೋಪಿಸುತ್ತಿದ್ದಾರೆ.

ಶುಕ್ರವಾರ ವರ್ಷಾ ದೂರಿನ ಆಧಾರದಲ್ಲಿ ಸಾಜನ್ ಮತ್ತು ಫಿರೋಝ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಸಂಗ್ರಹವಾದ ನಿಧಿಯ ಬಗ್ಗೆ ಶಂಕೆಗಳು ವ್ಯಕ್ತವಾದ ಬಳಿಕ ಈ ಬಗ್ಗೆ ತನಿಖೆ ನಡೆಸಲು ಕೊಚ್ಚಿ ಡಿಸಿಪಿ ಜಿ. ಪೂಂಗುಳಲಿ ಆದೇಶಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X