Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಯುಎಇಯ ಮೊದಲ ಮಂಗಳ ಮಿಶನ್ 'ಹೋಪ್' ಯಶಸ್ವಿ...

ಯುಎಇಯ ಮೊದಲ ಮಂಗಳ ಮಿಶನ್ 'ಹೋಪ್' ಯಶಸ್ವಿ ಉಡಾವಣೆ

ವಾರ್ತಾಭಾರತಿವಾರ್ತಾಭಾರತಿ20 July 2020 11:21 AM IST
share
ಯುಎಇಯ ಮೊದಲ ಮಂಗಳ ಮಿಶನ್ ಹೋಪ್ ಯಶಸ್ವಿ ಉಡಾವಣೆ

ಟೋಕಿಯೊ (ಜಪಾನ್), ಜು. 20: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ನ್ನು ಹೊತ್ತ ರಾಕೆಟನ್ನು ಸೋಮವಾರ ಜಪಾನ್‌ನಿಂದ ಯಶಸ್ವಿಯಾಗಿ ಉಡಾಯಿಸಲಾಗಿದೆ. ಇದು ಅರಬ್ ದೇಶವೊಂದರ ಮೊದಲ ಮಂಗಳ ಗ್ರಹ ಶೋಧಕ ನೌಕೆಯಾಗಿದೆ.

ಮಂಗಳ ಗ್ರಹದ ವಾತಾವರಣದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದಕ್ಕಾಗಿ ಯುಎಇ ಅಭಿವೃದ್ಧಿಪಡಿಸಿರುವ ಶೋಧಕ ನೌಕೆಯನ್ನು ಹೊತ್ತ ಜಪಾನ್‌ನ ರಾಕೆಟ್ ದಕ್ಷಿಣ ಜಪಾನ್‌ನ ಟನೆಗಶಿಮ ಬಾಹ್ಯಾಕಾಶ ಕೇಂದ್ರದಿಂದ ಸ್ಥಳೀಯ ಸಮಯ ಬೆಳಗ್ಗೆ 6:58ಕ್ಕೆ (ಭಾರತೀಯ ಕಾಲಮಾನ ಮುಂಜಾನೆ 3:28) ನಭಕ್ಕೆ ಚಿಮ್ಮಿತು.

ಅರೇಬಿಕ್ ಭಾಷೆಯಲ್ಲಿ ‘ಅಲ್-ಅಮಲ್’ ಎಂದು ಕರೆಯಲ್ಪಡುವ ಶೋಧ ನೌಕೆಯ ಉಡಾವಣೆಯನ್ನು ಇದಕ್ಕೂ ಮೊದಲು ಕೆಟ್ಟ ಹವಾಮಾನದಿಂದಾಗಿ ಎರಡು ಬಾರಿ ಮುಂದೂಡಲಾಗಿತ್ತು.

ಉಡಾವಣೆಯ ಒಂದು ಗಂಟೆ ಬಳಿಕ, ನೌಕೆಯು ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಆಗ ಜಪಾನ್ ನಿಯಂತ್ರಣ ಕೊಠಡಿಯಲ್ಲಿದ್ದ ವಿಜ್ಞಾನಿಗಳು ಚಪ್ಪಾಳೆ ತಟ್ಟುತ್ತಾ ಸಂಭ್ರಮಾಚರಿಸುವುದು ಕಂಡುಬಂತು.

‘‘ರಾಕೆಟ್ ಹಾರಾಟದ ಮಾರ್ಗವನ್ನು ನಿಖರವಾಗಿ ಅನುಸರಿಸಲಾಗಿದೆ ಹಾಗೂ ನಿಗದಿಯಾದಂತೆ ‘ಹೋಪ್’ ಶೋಧ ನೌಕೆಯು ರಾಕೆಟ್‌ನಿಂದ ಬೇರ್ಪಟ್ಟಿದೆ’’ ಎಂದು ರಾಕೆಟ್ ನಿರ್ಮಾಣ ಸಂಸ್ಥೆ ಮಿತ್ಸುಬಿಶಿ ಹೆವಿ ಇಂಡಸ್ಟ್ರೀಸ್ ತಿಳಿಸಿದೆ.

2021ರ ಸೆಪ್ಟಂಬರ್‌ನಲ್ಲಿ ‘ಹೋಪ್’ ಮಂಗಳ ಗ್ರಹದ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

► ಭೂಮಿಯ ಸುತ್ತ ಯುಎಇಯ 9 ಉಪಗ್ರಹಗಳು

ಯುಎಇಯ ಒಂಬತ್ತು ಉಪಗ್ರಹಗಳು ಈಗಾಗಲೇ ಭೂಮಿಯ ಸುತ್ತ ತಿರುಗುತ್ತಿವೆ. ಮುಂದಿನ ವರ್ಷಗಳಲ್ಲಿ ಇನ್ನೂ ಎಂಟು ಉಪಗ್ರಹಗಳನ್ನು ಉಡಾಯಿಸುವ ಗುರಿಯನ್ನು ಅದು ಹೊಂದಿದೆ.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಯುಎಇಯ ಮೊದಲ ಗಗನಯಾನಿ ಬಾಹ್ಯಾಕಾಶ ಯಾನ ಕೈಗೊಂಡಿದ್ದು, ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದಾರೆ.

► ‘ಬುರ್ಜ್ ಖಲೀಫ’ದಲ್ಲಿ ಬೆಳಕಿನ ಚಿತ್ತಾರ

ಮಂಗಳ ಗ್ರಹ ಶೋಧ ನೌಕೆ ‘ಹೋಪ್’ನ ಯಶಸ್ವಿ ಉಡಾವಣೆಯನ್ನು ದುಬೈಯಲ್ಲಿ ಭರ್ಜರಿಯಾಗಿ ಆಚರಿಸಲಾಗಿದೆ. ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡ ‘ಬುರ್ಜ್ ಖಲೀಫ’ವನ್ನು ಉಡಾವಣೆಗಿಂತ ಗಂಟೆಗಳ ಮೊದಲೇ ಬೆಳಕಿನಿಂದ ಸಿಂಗರಿಸಲಾಗಿತ್ತು. ಹಾಗೂ ಜಪಾನ್‌ನಲ್ಲಿ ಉಡಾವಣೆಯ ಸಮಯಕ್ಕೆ ಹೊಂದಿಕೊಳ್ಳುವಂತೆ, ಕಟ್ಟಡದಲ್ಲಿ 10 ಸೆಕೆಂಡ್‌ಗಳ ಕೌಂಟ್‌ಡೌನ್‌ನ್ನೂ ತೋರಿಸಲಾಗಿತ್ತು.

‘‘ಈ ಬಾಹ್ಯಾಕಾಶ ಯೋಜನೆಯು ಯುಎಇ ಮತ್ತು ವಲಯದ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ’’ ಎಂದು ಯುಎಇಯ ಮುಹಮ್ಮದ್ ಬಿನ್ ರಶೀದ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಯೂಸುಫ್ ಹಾಮದ್ ಅಲ್-ಶೈಬಾನಿ ಉಡಾವಣೆಯ ಬಳಿಕ ಜಪಾನ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

► ಮಂಗಳನ ಮೇಲೆ ಇಳಿಯುವುದಿಲ್ಲ

2021 ಫೆಬ್ರವರಿ ವೇಳೆಗೆ ‘ಹೋಪ್’ ಶೋಧಕ ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಆದರೆ, ಅದು ಕೆಂಪು ಗ್ರಹ (ಮಂಗಳ)ದ ಮೇಲೆ ಇಳಿಯುವುದಿಲ್ಲ. ಬದಲಿಗೆ, ಅದು ಒಂದು ಇಡೀ ಮಂಗಳ ವರ್ಷ (687 ದಿನಗಳು) ಆ ಗ್ರಹದ ಸುತ್ತ ತಿರುಗುತ್ತದೆ.

► ಭೂಮಿಯ ಅತಿ ಸನಿಹಕ್ಕೆ ಬಂದಿರುವ ಮಂಗಳ

ಭೂಮಿ ಮತ್ತು ಮಂಗಳ ಗ್ರಹಗಳು ಅತ್ಯಂತ ಸಮೀಪದಿಂದ ಹಾದು ಹೋಗುವ ಅವಕಾಶವನ್ನು ಬಳಸಿಕೊಳ್ಳುವ ಮೂರು ಮಂಗಳ ಗ್ರಹ ಯೋಜನೆಗಳ ಪೈಕಿ ಯುಎಇಯ ‘ಹೋಪ್’ ಒಂದಾಗಿದೆ. ಚೀನಾದ ‘ತಿಯಾನ್ವೆನ್-1’ ಮತ್ತು ಅಮೆರಿಕದ ‘ಮಾರ್ಸ್2020’ ಉಳಿದ ಎರಡು ಮಂಗಳ ಯೋಜನೆಗಳು. ‘ತಿಯಾನ್ವೆನ್-1’ ಜುಲೈ 23ರಂದು ಉಡಾವಣೆಗೊಳ್ಳಲು ನಿಗದಿಯಾದರೆ, ‘ಮಾರ್ಸ್2020’ ಜುಲೈ 30ರಂದು ಹಾರಾಟಕ್ಕೆ ಸಿದ್ಧವಾಗಿದೆ.

ಅಕ್ಟೋಬರ್‌ನಲ್ಲಿ ಮಂಗಳ ಮತ್ತು ಭೂಮಿಗಳು ಪರಸ್ಪರ ಅತ್ಯಂತ ಸಮೀಪಕ್ಕೆ ಬರಲಿದ್ದು, ಅವುಗಳ ನಡುವಿನ ದೂರವು ಸುಮಾರು 6.20 ಕೋಟಿ ಕಿಲೋಮೀಟರ್ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ಅವುಗಳ ನಡುವಿನ ಗರಿಷ್ಠ ದೂರವು 40 ಕೋಟಿ ಕಿ.ಮೀ. ಆಗಿರುತ್ತದೆ.

► 100 ವರ್ಷಗಳಲ್ಲಿ ಕೆಂಪು ಗ್ರಹದಲ್ಲಿ ಮಾನವ ವಸಾಹತಿಗೆ ಅಡಿಪಾಯ

ಮಂಗಳ ಗ್ರಹದ ಹವಾಮಾನ ವ್ಯವಸ್ಥೆ ಬಗ್ಗೆ ಸಮಗ್ರ ಚಿತ್ರಣವನ್ನು ಪಡೆಯುವುದು ಯುಎಇಯ ಮಂಗಳ ಗ್ರಹ ಶೋಧಕ ನೌಕೆಯ ಉದ್ದೇಶವಾಗಿದೆ.

ಆದರೆ, ಈ ಯೋಜನೆಯು ಮುಂದಿನ ಬೃಹತ್ ಯೋಜನೆಯೊಂದರ ಅಡಿಪಾಯವೂ ಆಗಿದೆ. ಮುಂದಿನ 100 ವರ್ಷಗಳಲ್ಲಿ ಮಂಗಳ ಗ್ರಹದಲ್ಲಿ ಸಂಭಾವ್ಯ ಮಾನವ ವಸಾಹತೊಂದನ್ನು ಸ್ಥಾಪಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ. ಅದಕ್ಕಾಗಿ ಪೂರ್ವ ಸಿದ್ಧತೆ ಮಾಡುವ ಗುರಿಯನ್ನೂ ಈ ಯೋಜನೆ ಹೊಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X