ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ: ಐವನ್ ಡಿಸೋಜ ಆಗ್ರಹ
ಮಂಗಳೂರು,ಜು.20: ಒಂದು ಸಾವಿರ ವೆಂಟಿಲೇಟರ್ ಖರೀದಿಸಿದ್ದಾಗಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅಫಿದಾವಿತ್ ರಾಜ್ಯ ಸಸರಕಾರ ಅದಕ್ಕಾಗಿ 12ಲಕ್ಷ ರೂ ಪಾವತಿಸಿರುವುದಾಗಿ ತಿಳಿಸಿದೆ. ಅದಕ್ಕಿರುವ ಮಾರುಕಟ್ಟೆ ಬೆಲೆ 4 ಲಕ್ಷ ರೂ ಮಾತ್ರ.ಇತರ ರಾಜ್ಯಗಳಾದ ತಮಿಳುನಾಡು ,ಆಂಧ್ರ, ಮಹಾರಾಷ್ಟ್ರ ಖರೀದಿಸಿದ ಇದೇ ರೀತಿಯ ವೆಂಟಿಲೇಟರ್ಗೆ ಗರಿಷ್ಠ ಮೊತ್ತ 6ಕ್ಷ ರೂ ಮೀರುವುದಿಲ್ಲ ಹಾಗಾದರೆ ಕರ್ನಾಟಕದಲ್ಲಿ ವೆಂಟಿಲೇಟರ್ ಖರೀದಿಗೆ 12ಲಕ್ಷ ಏಕೆ ಪಾವತಿಸಬೇಕಾಯಿತು ಎಂದು ಜನರಿಗೆ ತಿಳಿಸಬೇಕಾಗಿದೆ. ಮಾಸ್ಕ್ ಖರೀದಿಯಲ್ಲೂ ಒಂದು ಮಾಸ್ಕ್ಗೆ 200 ರೂ. ಪಾವತಿಸಿ 10 ಲಕ್ಷ ಮಾಸ್ಕ್ ಖರೀದಿಸಿರುವುದಾಗಿ ತಿಳಿಸಿದೆ. ಇದರಲ್ಲೂ ಸುಮಾರು 40 ಕೋಟಿಯಷ್ಟು ಅವ್ಯವಹಾರ ಆಗಿರುವ ಗುಮಾನಿ ಇದೆ. ಪಿ.ಪಿ.ಇ ಕಿಟ್ ಗಳಲ್ಲಿ 49 ಕೋಟಿಯಾಗಬೇಕಿತ್ತು, ಅಫಿದಾವಿತ್ನಲ್ಲಿ 150 ಕೋಟಿ ರೂ. ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ನ್ಯಾಯಾಲಯಕ್ಕೆ ಸರಕಾರದ ಮೂಲಕ ನೀಡಲಾದ ಹೇಳಿಕೆಯಿಂದಲೇ ಅವ್ಯವಹಾರ ಬಯಲಿಗೆ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ನೈತಿಕ ಹೊಣೆಗಾರಿಕೆ ಇದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಕೆಪಿಸಿಸಿ ವಕ್ತಾರರಾದ ಐವನ್ ಡಿ ಸೋಜ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ 3000 ಹಾಸಿಗೆಗಳ ತಾತ್ಕಲಿಕ ಆಸ್ಪತ್ರೆ ಹಾಗೂ 50 ಆ್ಯಂಬುಲೆನ್ಸ್ಗಳನ್ನು ಹಾಗೂ ಅಗತ್ಯವಿರುವ ವೆಂಟಿಲೇಟರ್ಗಳನ್ನು ಒದಗಿಸಬೇಕು ಎಂದು ಐವನ್ ಡಿ ಸೋಜ ಆಗ್ರಹಿಸಿದ್ದಾರೆ.