ಬಿಎಫ್ಎ ಲಾಕ್ ಡೌನ್ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ
ಸುಳ್ಯ, ಜು.22: ಬೀಜದಕಟ್ಟೆ ಫ್ಯಾನ್ಸ್ ಅಸೋಸಿಯೇಶನ್ (ಬಿಎಫ್ಎ) ವತಿಯಿಂದ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಲಾಕ್ ಡೌನ್ ಸಂದರ್ಭ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ವಿಜೇತರಾದ ಪ್ರತಿಷ್ಠಿತ ಹೋಲಿ ಕ್ರಾಸ್ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲ ನಾಗಾರಾಜ್ ಅವರನ್ನು ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮರ್ ಬೀಜದಕಟ್ಟೆ ಟಿ ಶರ್ಟ್, ಟೋಪಿ, ಮಾಸ್ಕ್ ಮತ್ತು ಸ್ಯಾನಿಟೈಝರ್ ನೀಡಿ ಅಭಿನಂದಿಸಿದರು.
ಇದೇ ಸಂದರ್ಭ ಪ್ರಸಕ್ತ ಸಾಲಿನ ಸಿಬಿಎಸ್ಇ 10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೋಲಿ ಕ್ರಾಸ್ ವಿದ್ಯಾಸಂಸ್ಥೆ 100 ಶೇ. ಫಲಿತಾಂಶ ದಾಖಲಿಸಿದ ಹಿನ್ನೆಲೆಯಲ್ಲಿ ನಾಗರಾಜ್ ಅವರನ್ನು ಸಜ್ಜನ ಪ್ರತಿಷ್ಠಾನ ಮತ್ತು ಬಿಎಫ್ಎ ವತಿಯಿಂದ ಗೌರವಿಸಲಾಯಿತು.
Next Story