ಬೈರಂಪಳ್ಳಿ ಮದ್ಯದಂಗಡಿಗೆ ವಿರೋಧ: ಅಬಕಾರಿ ಡಿಸಿಗೆ ಮನವಿ
ಉಡುಪಿ, ಜು.22: ಬೈರಂಪಳ್ಳಿ ಗ್ರಾಪಂ ವ್ಯಾಪ್ತಿಯ ಸಂತ್ಯಾರು ಬಳಿ ಎಂಎಸ್ ಐಎಲ್ನ ಮದ್ಯದಂಗಡಿ ತೆರೆಯವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಈ ಕುರಿತು ಜು.21ರಂದು ಜಿಲ್ಲಾ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇಲ್ಲಿ ಧರ್ಮಸ್ಥಳ ಯೋಜನೆ ಮೂಲಕ ಮದ್ಯವರ್ಜನ ಶಿಬಿರ ನಡೆಸುವ ಮೂಲಕ ಬಹಳಷ್ಟು ಜನ ಮದ್ಯ ಮುಕ್ತರಾಗಿದ್ದಾರೆ. ಗ್ರಾಮದ ಸಮೀಪ ಎರಡು ಕಿ.ಮೀ. ದೂರದಲ್ಲಿ ಬಾರ್ ಹಾಗೂ ವೈನ್ಶಾಪ್ಗಳಿವೆ. ಆದರೂ ಇಲ್ಲಿ ಮದ್ಯದಂಗಡಿ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ವೈನ್ಶಾಪ್ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಅಬಕಾರಿ ಆಯುಕ್ತ ನಾಗೇಶ್ ಕುಮಾರ್ ಮಾತನಾಡಿ, ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗುವುದು. 100ಕ್ಕೂ ಅಧಿಕ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವುದರಿಂದ ಈ ವಿಚಾರವನ್ನು ಮೇಲಾಧಿ ಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೈರಂಪಳ್ಳಿ ಮಾಜಿ ಗ್ರಾಪಂ ಅಧ್ಯಕ್ಷ ಜಿಯಾನಂದ ಹೆಗ್ಡೆ, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಬೈರಂಪಳ್ಳಿ ಶ್ರೀಧರ್ ಶೆಟ್ಟಿ, ವಸಂತಿ ಕುಲಾಲ್, ಪ್ರದೀಪ್ ಶೆಟ್ಟಿ, ಸುಭಾಷ್ ಶೆಟ್ಟಿ, ನವೀನ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಶೀನ, ಪದ್ಮನಾಭ ಕುಲಾಲ್, ಸುಂದರ ಕುಲಾಲ್ ಉಪಸ್ಥಿತರಿದ್ದರು.