ಹಿರಿಯಡ್ಕ: ವಿದ್ಯಾರ್ಥಿಗಳಿಂದ ಭತ್ತದ ನಾಟಿ
ಉಡುಪಿ, ಜು.22: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಪಡ್ಡಂಹಾಡಿ ಬೆಟ್ಟುವಿನ ಶಾಂತಲಕ್ಷ್ಮೀ ಎನ್. ಕರ್ಕೆರಾ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳು ಭತ್ತದ ನಾಟಿಯನ್ನು ಯಶಸ್ವಿಯಾಗಿ ನಡೆಸಿದರು.
ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭತ್ತದ ನಾಟಿಯನ್ನು ಮಾಡುವುದರ ಮೂಲಕ ಕೃಷಿಯ ಮಹತ್ವವನ್ನು ಅರಿತುಕೊಂಡರು. ಕಾಲೇಜಿನ ಪ್ರಾಂಶುಪಾಲ ರಾದ ಡಾ.ನಿಕೇತನರ ಮಾರ್ಗದರ್ಶನದಲ್ಲಿ ನಡೆದ ಈ ಭತ್ತದ ನಾಟಿಯಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರವೀಣ್ ಶೆಟ್ಟಿ, ಯುವ ರೆಡ್ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ರಾಘವೇಂದ್ರ ಪಿ ಕೆ, ರೋವರ್ಸ್ ಸ್ಕೌಟ್ ಲೀಡರ್ ಅನಿಲ್ಕುಮಾರ್ ಕೆ.ಎಸ್., ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಆನಂದ ಎಂ.ಬಿ. ಮೊದಲಾದವರು ಪಾಲ್ಗೊಂಡಿದ್ದರು.
Next Story