Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮಂಗಳ ಶೋಧಕ ನೌಕೆಯನ್ನು ಉಡಾಯಿಸಿದ ಚೀನಾ

ಮಂಗಳ ಶೋಧಕ ನೌಕೆಯನ್ನು ಉಡಾಯಿಸಿದ ಚೀನಾ

ವಾರ್ತಾಭಾರತಿವಾರ್ತಾಭಾರತಿ23 July 2020 9:23 PM IST
share

ವೆನ್‌ಚಂಗ್ (ಚೀನಾ), ಜು. 23: ಮಂಗಳ ಶೋಧಕ ನೌಕೆ ‘ತಿಯಾನ್‌ವೆನ್-1’ನ್ನು ಚೀನಾ ಗುರುವಾರ ದಕ್ಷಿಣದ ಹೈನಾನ್ ದ್ವೀಪದಿಂದ ಉಡಾಯಿಸಿದೆ.

ಚೀನೀ ಭಾಷೆಯಲ್ಲಿ ‘ಆಕಾಶಕ್ಕೆ ಪ್ರಶ್ನೆಗಳು’ ಎಂಬ ಅರ್ಥವನ್ನು ಹೊಂದಿದ ಶೋಧಕ ನೌಕೆಯನ್ನು ಹೊತ್ತ ಚೀನಾದ ಅತಿ ದೊಡ್ಡ ಬಾಹ್ಯಾಕಾಶ ರಾಕೆಟ್ ‘ಲಾಂಗ್ ಮಾರ್ಚ್ 5’ ಆಕಾಶಕ್ಕೆ ಚಿಮ್ಮಿದಾಗ ಎಂಜಿನಿಯರ್‌ಗಳು ಮತ್ತು ಇತರ ಉದ್ಯೋಗಿಗಳು ಸಂಭ್ರಮಿಸಿದರು.

ಮಂಗಳ ಶೋಧಕ ನೌಕೆಯ ಉಡ್ಡಯನವು ಯಶಸ್ವಿಯಾಗಿದೆ ಎಂಬುದಾಗಿ ಸೈಟ್ ಕಮಾಂಡರ್ ಝಾಂಗ್ ಕ್ಸುಯೆಯು ಬಳಿಕ ಸರಕಾರಿ ಟಿವಿ ಸಿಸಿಟಿವಿಯಲ್ಲಿ ಘೋಷಿಸಿದರು.

5 ಟನ್ ಭಾರದ ತಿಯಾನ್‌ವೆನ್-1 ನೌಕೆಯು 5.5 ಕೋಟಿ ಕಿಲೋಮೀಟರ್ ದೂರವನ್ನು ಏಳು ತಿಂಗಳು ಕ್ರಮಿಸಿದ ಬಳಿಕ 2021ರ ಫೆಬ್ರವರಿಯಲ್ಲಿ ಮಂಗಳ ಗ್ರಹದಲ್ಲಿ ಇಳಿಯುತ್ತದೆ ಎಂದುದ ನಿರೀಕ್ಷಿಸಲಾಗಿದೆ.

ಚೀನಾದ ಈ ಮಂಗಳ ಯೋಜನೆಯು ಗ್ರಹದ ಕಕ್ಷೆಯಲ್ಲಿ ತಿರುಗುವ ಆರ್ಬಿಟರ್, ಗ್ರಹದ ಮೇಲೆ ಇಳಿಯುವ ಲ್ಯಾಂಡರ್ ಮತ್ತು ಗ್ರಹದ ಮೇಲೆ ಚಲಿಸುವ ರೋವರ್ (ಶೋಧಕ)ವನ್ನು ಹೊಂದಿದೆ. ಶೋಧಕವು ಮಂಗಳ ಗ್ರಹಮ ಮಣ್ಣನ್ನು ಪರೀಕ್ಷಿಸುತ್ತದೆ.

ಮಂಗಳ ಗ್ರಹವು ಭೂಮಿಯ ಅತಿ ಸನಿಹಕ್ಕೆ ಬಂದಿರುವ ಅವಕಾಶವನ್ನು ಚೀನಾ, ಅಮೆರಿಕ ಮತ್ತು ಯುಎಇಗಳು ಬಳಸಿಕೊಂಡಿವೆ. ಯುಎಇಯು ಮಂಗಳ ಶೋಧಕ ನೌಕೆಯೊಂದನ್ನು ಸೋಮವಾರ ಜಪಾನ್‌ನ ದ್ವೀಪವೊಂದರಿಂದ ಯಶಸ್ವಿಯಾಗಿ ಉಡಾಯಿಸಿದೆ. ಜುಲೈ 30ರಂದು ತನ್ನ ಮಂಗಳ ಶೋಧಕ ನೌಕೆಯನ್ನು ಉಡಾಯಿಸಲು ಅಮೆರಿಕವು ಸಿದ್ಧತೆಗಳನ್ನು ನಡೆಸುತ್ತಿದೆ.

ಇದು ಚೀನಾದ ಮೊದಲ ಯಶಸ್ವಿ ಮಂಗಳ ಯೋಜನೆಯಾಗಿದೆ. 2011ರಲ್ಲಿ ಅದು ರಶ್ಯದ ಜೊತೆಗೆ ಮಂಗಳಕ್ಕೆ ಶೋಧಕ ನೌಕೆಯನ್ನು ಕಳುಹಿಸುವ ಯೋಜನೆಯನ್ನು ರೂಪಿಸಿತ್ತಾದರೂ, ಅದು ಉಡ್ಡಯನ ಹಂತದಲ್ಲೇ ವಿಫಲವಾಗಿತ್ತು.

ಚಂದ್ರನಲ್ಲಿಗೆ 2 ಶೋಧಕಗಳು

ಚೀನಾ ಈಗಾಗಲೇ ಚಂದ್ರನಲ್ಲಿಗೆ ಎರಡು ಶೋಧಕಗಳನ್ನು ಕಳುಹಿಸಿದೆ. ಎರಡನೇ ಶೋಧಕವನ್ನು ಚಂದ್ರನ ಇನ್ನೊಂದು ಬದಿಯಲ್ಲಿ ಸರಾಗವಾಗಿ ಇಳಿಸುವ ಮೂಲಕ, ಈ ಸಾಧನೆಯನ್ನು ಮಾಡಿದ ಮೊದಲ ದೇಶವಾಗಿ ಅದು ಹೊರಹೊಮ್ಮಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X