ಉಡುಪಿ ಜಿಪಂ ಸಿಇಓಯಿಂದ ಅಂಬೇಡ್ಕರ್ಗೆ ಅವಮಾನ: ಆರೋಪ
ಉಡುಪಿ, ಜು.24: ಕೋಟ ಗಿಳಿಯಾರಿನ ಅಂಬೇಡ್ಕರ್ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಸಿಇಓ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದಸಂಸ ಹೋರಾಟಗಾರ ಸುಂದರ ಕಪ್ಪೆಟ್ಟು ಆರೋಪಿಸಿದ್ದಾರೆ.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಚಪ್ಪಲಿ ಹಾಕಿ ಅಂಬೇಡ್ಕರ್ರ ಭಾವಚಿತ್ರಕ್ಕೆ ದೀಪ ಬೆಳಗಿಸಿರುವುದು ಖಂಡನೀಯ. ಆದುದರಿಂದ ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾುಸಿದ್ದಾರೆ.
Next Story