ಉಡುಪಿ: ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಆರ್ಥಿಕ ನೆರವು
ಉಡುಪಿ, ಜು.24: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಇತ್ತೀಚೆಗೆ ಉಡುಪಿಯ ರಾಮ ಭವನ ಹೋಟೆಲಿನ ಸಂಕೀರ್ಣದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ.ಶಂಕರ್, ಖಜಾಂಜಿ ರಾಜೇಶ್ ಭಟ್ ಪಣಿಯಾಡಿ, ಪ್ರತಿಷ್ಠಾನದ ಸದಸ್ಯರಾದ ಸುಮಿತ್ರಾ ಕೆರೆಮಠ, ಪದ್ಮಾಸಿನಿ ಉದ್ಯಾವರ, ಗಜಾನನ ಹೆಗಡೆ, ಭಾವನಾ ಕೆರೆಮಠ, ಸಂಚಾಲಕ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.
Next Story