ಪಡುಬಿದ್ರಿ: ತಾಯಿ ಮೃತಪಟ್ಟ 11 ದಿನಗಳೊಳಗೆ ಇಬ್ಬರು ಮಕ್ಕಳು ಮೃತ್ಯು
ಪಡುಬಿದ್ರಿ: ತಾಯಿ ಮೃತಪಟ್ಟು 11 ದಿನಗಳು ಕಳೆಯುವ ಮೊದಲೇ ಇನ್ನಿಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ಪಡುಬಿದ್ರಿಯ ದಿ.ವೆಂಕಟರಾಯ ಆಚಾರ್ಯ ಅವರ ಪತ್ನಿ ವಾರಿಜಾಕ್ಷಿ ಆಚಾರ್ಯ (80) ನಿಧನ ಹೊಂದಿದ್ದರು. ಜುಲೈ 22ರ ಬುಧವಾರದಂದು 11ನೇ ದಿನದ ತಿಥಿ ವಿಧಿ ವಿಧಾನಗಳು ನಡೆದಿತ್ತು. ಇದು ಆದ ಕೆಲ ಗಂಟೆಗಳಲ್ಲಿ ಮಕ್ಕಳ ಪೈಕಿ ಹಿರಿಯ ಮಗನಾದ ವಿವಾಹಿತ ಉದಯ ಆಚಾರ್ಯ(55) ಎಂಬವರು ಮಧ್ಯಾಹ್ನದ ಊಟ ಮುಗಿಸಿ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ತಡರಾತ್ರಿ ಎರಡೂವರೆ ಗಂಟೆಯ ಸುಮಾರಿಗೆ ಮತ್ತೋರ್ವ ಮಗನಾದ ಅವಿವಾಹಿತ, ಬೆಂಗಳೂರು ವ್ಯಾಪ್ತಿಯ ವಿಶ್ವಕರ್ಮ ಸಂಘದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಆಚಾರ್ಯ ಯಾನೆ ವಿಶು ಆಚಾರ್ಯ (45) ಕೂಡಾ ಸಾವಿಗೀಡಾಗಿದ್ದಾರೆ.
Next Story