ಮಲಾರ್ ಹೆಲ್ಪ್ ಲೈನ್ನಿಂದ ಕರಪತ್ರ ಬಿಡುಗಡೆ
ಮಂಗಳೂರು, ಜು.27: ಕೊರೋನ ಬಗ್ಗೆ ಜಾಗೃತರಾಗಲು ಮಲಾರ್ ಹೆಲ್ಪ್ಲೈನ್ ವತಿಯಿಂದ ಇತ್ತೀಚೆಗೆ ಕರಪತ್ರ ಬಿಡುಗಡೆಗೊಳಿಸಲಾಯಿತು. ಮಲಾರ್ ಹೆಲ್ಪ್ಲೈನ್ ಅಧ್ಯಕ್ಷ ಶಮೀರ್ ಟಿಪ್ಪುನಗರ ಅಧ್ಯಕ್ಷತೆ ವಹಿಸಿದ್ದರು.
ಎಕ್ಸಿಕ್ಯುಟಿವ್ ಕಮಿಟಿಯ ಸದಸ್ಯರು ಊರಿನ ಜುಮಾ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಜಾಗೃತಿ ಕಾರ್ಯದ ಬಗ್ಗೆ ಮಾಹಿತಿ ನೀಡಿ ಕರಪತ್ರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ತುರ್ತು ಪರಿಹಾರ ತಂಡದ ಉಸ್ತುವಾರಿ ಕಬೀರ್ ಮಲಾರ್, ಕಾರ್ಯದರ್ಶಿಗಳಾದ ಫಾರೂಕ್ ಎಂಕೆ,ಕೋಶಾಧಿಕಾರಿ ರಿಝ್ವನ್ ಅರಸ್ತಾನ ಹಾಗೂ ಅರಸ್ತಾನ ಜುಮಾ ಮಸೀದಿಯ ಅಧ್ಯಕ್ಷ ಅಲ್ತಾಫ್ ಹಾಮದ್, ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಇಕ್ಬಾಲ್, ಮುಹಿಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಆಸಿಫ್, ಮಸ್ಜಿದುರ್ರಹ್ಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್, ಖಾಲಿದ್ ಬಿನ್ ವಲೀದ್ ಮಸೀದಿಯ ಅಧ್ಯಕ್ಷ ಮಜೀದ್ ಮಾಸ್ಟರ್, ಪಿಎಫ್ಐ ಮುಖಂಡರಾದ ಝಾಹಿದ್ ಮಲಾರ್, ನಾಸಿರ್ ಮಲಾರ್, ಎಸ್ವೈಎಸ್ ಮಲಾರ್ ಅಧ್ಯಕ್ಷ ರಝಾಕ್ ಅಜ್ಮೀರ್, ಎಸ್ಸೆಸ್ಸೆಎಫ್ನ ನೌಫಲ್ ಮರ್ಝೂಖಿ,ಆಸರೆ ಫೌಂಡೇಶನ್ನ ಬಶೀರ್ ಅಕ್ಷರನಗರ, ಮತ್ತಿತರರು ಉಪಸ್ಥಿತರಿದ್ದರು.