ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ರ ಜನ್ಮದಿನ ಆಚರಣೆ
ಮಂಗಳೂರು, ಜು.29: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ, ನಾಲ್ಕು ಅವಧಿಗಳಿಗೆ ರಾಜ್ಯ ಸಭಾ ಸದಸ್ಯರಾಗಿ ಸಂಸತ್ತಿನಲ್ಲಿ ಸದಾ ಜನ ಪರ ಧ್ವನಿಯಾಗಿದ್ದ ಇದೀಗ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರ ಜನ್ಮ ದಿನವನ್ನು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ನಗರದ ಪ್ರಸಾಂತ್ ನಿಲಯದ ಆಶ್ರಮವಾಸಿಗಳಿಗೆ ಮಧ್ಯಾಹ್ನದ ಭೋಜನ ನೀಡುವ ಮೂಲಕ ಆಚರಿಸಿದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಮಾತನಾಡಿದರು. ಮನಪಾ ವಿಪಕ್ಷ ನಾಯಕ ಅಬ್ದುರ್ರವೂಫ್ ಬಜಾಲ್ ಸ್ವಾಗತಿಸಿದರು. ದ.ಕ. ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷರಾದ ಸದಾಶಿವ ಉಳ್ಳಾಲ್ ವಂದಿಸಿದರು. ಪನಾಮ ಕಾರ್ಪೊರೇಶನ್ನ ಉದ್ಯಮಿ ವಿವೇಕ್ರಾಜ್, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಜೆಸಿಂತಾ ವಿಜಯ್ ಆಲ್ಫ್ರೆಡ್, ಕವಿತಾ ಸನಿಲ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಅಪ್ಪಿಎಸ್., ಜಿಪಂ ಸದಸ್ಯ ಶಾಹುಲ್ ಹಮೀದ್, ನೀರಜ್ಚಂದ್ರ ಪಾಲ್, ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ನಿತ್ಯಾನಂದ ಶೆಟ್ಟಿ, ರಕ್ಷಿತ್ ಸುವರ್ಣ, ನಝೀರ್ ಬಜಾಲ್, ಭುವನ್ ಕರ್ಕೇರ, ಶೋಭಾ ಪಡೀಲ್, ಶಶಿಕಲಾ, ಸಿಸ್ಟರ್ ಮರ್ಸಿಲಿನ್ ಬ್ರಾಗ್ಸ್, ಸಿಸ್ಟರ್ ಡೊರೊಪ್ಸ್, ಮಹೇಶ್ ಕೋಡಿಕಲ್, ಶೌನಕ್ ರೈ, ಶ್ಯಾಮ್ ರಾಯ್ ಸುವರ್ಣ, ಅದ್ದು ಕೃಷ್ಣಾಪುರ, ಸುರೇಶ್ ಪೂಜಾರಿ, ಶರೀಫ್ ದೇರಳಕಟ್ಟೆ, ಅಶ್ರಫ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.