ಕಲಬುರ್ಗಿ: ಕೊರೋನದಿಂದ ಗುಣಮುಖರಾದ ಸಿಬ್ಬಂದಿಗೆ ನ್ಯಾಯಮೂರ್ತಿಗಳಿಂದ ಸನ್ಮಾನ
ಕಲಬುರ್ಗಿ, ಆ.5: ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಕ್ವಾರಂಟೈನ್ ಆಗಿ ಗುಣಮುಖರಾಗಿದ್ದ ಕಲಬುರ್ಗಿ ಪೀಠದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಹೈಕೋರ್ಟ್ನ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು ಹೂ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, ಕೊರೋನ ಸೋಂಕು ಬರದಂತೆ ತಡೆಗಟ್ಟಲು ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಪದೇ ಪದೇ ಸ್ಯಾನಿಟೈಸರ್ ಬಳಸಬೇಕು. ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಓಡಾಡಬೇಕೆಂದು ಸಲಹೆ ನೀಡಿದರು.
ನೀವು ನಮ್ಮೆಲ್ಲರ ಕುಟುಂಬದ ಸದಸ್ಯರಿದ್ದಂತೆ, ಯಾವುದೇ ಹೆದರಿಕೆ ಇಲ್ಲದೆ ಕರ್ತವ್ಯ ನಿರ್ವಹಿಸುವಂತೆ ಧೈರ್ಯ ತುಂಬಿದರು.
ಜ್ವರ, ಕೆಮ್ಮುನಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ವಹಿಸದೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ, ಕೊರೋನವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
Next Story