Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ10 Aug 2020 12:10 AM IST
share
ಓ ಮೆಣಸೇ...

ಯಡಿಯೂರಪ್ಪ ಸರಕಾರ ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ಮುಚ್ಚಿ ಹಾಕಿದೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ನೀವು ಅಗೆದು ತೆಗೆಯಿರಿ.


ಕೊರೋನ ವೈರಸ್ ಆರಂಭದಲ್ಲಿ ಎಷ್ಟಿತ್ತೋ ಈಗಲೂ ಅಷ್ಟೇ ಅಪಾಯಕಾರಿಯಾಗಿದೆ - ನರೇಂದ್ರ ಮೋದಿ, ಪ್ರಧಾನಿ

ಆದರೂ ಅದಿನ್ನೂ ಸಂಘಪರಿವಾರದವರಷ್ಟು ಅಪಾಯಕಾರಿಯಾಗಿಲ್ಲ.


ಕಾಂಗ್ರೆಸ್ - ಜೆಡಿಎಸ್ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದವರ ಋಣ ನಮ್ಮ ಮೇಲಿದೆ
 - ಕೆ.ಎಸ್.ಈಶ್ವರಪ್ಪ, ಸಚಿವ

ಮತದಾರರ ಋಣದಿಂದ ಮುಕ್ತರಾಗಿದ್ದೀರಿ ಎಂದಾಯಿತು.


ವಿರೋಧ ಮಾಡಬೇಕು ಎನ್ನುವ ಉದ್ದೇಶದಿಂದ ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದಾರೆ - ಶಶಿಕಲಾ ಜೊಲ್ಲೆ, ಸಚಿವೆ
ವಿರೋಧ ಮಾಡಬಾರದು ಎಂದು ವಿರೋಧ ಮಾಡಬೇಕಾಗಿತ್ತೇ?


ಸಂಕಷ್ಟದ ನಾಯಕತ್ವ ಎಂದರೆ ಯಡಿಯೂರಪ್ಪ - ಆರ್.ಅಶೋಕ್, ಸಚಿವ
 ಸಂಕಷ್ಟದ ರೂಪದಲ್ಲಿ ನೀವು ಮತ್ತು ನಿಮ್ಮ ಬಣ ಇರುವಾಗ ಇನ್ನೇನಾಗುತ್ತದೆ?


  ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಅವಕಾಶವಿಲ್ಲ - ಬಸವರಾಜ ಬೊಮ್ಮಾಯಿ, ಸಚಿವ 

ಸದ್ಯಕ್ಕೆ ಅದರ ಹೊಣೆಗಾರಿಕೆಯನ್ನು ಕೊರೋನ ಹೊತ್ತುಕೊಂಡಿದೆ.


ನಮ್ಮದು ಮೂರು ಚಕ್ರದ ಸರಕಾರವಾದರೂ ಸ್ಟೇರಿಂಗ್ ನನ್ನ ಬಳಿಯೇ ಇದೆ -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ವಾಹನ ಇಲ್ಲದೆ ಬರೇ ಸ್ಟೇರಿಂಗ್‌ನ್ನು ಇಟ್ಟುಕೊಂಡು ಏನು ಮಾಡುತ್ತೀರಿ?


ನನ್ನನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು - ಶ್ರೀರಾಮುಲು, ಸಚಿವ
 ಹಾಗಾದರೆ, ನೀವೇ ಸೈಡ್‌ಗೆ ಬಂದು ನಿಂತದ್ದೋ?


ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿವೃತ್ತ ಕುದುರೆಗಳು - ಸಿ.ಪಿ.ಯೋಗೇಶ್ವರ್, ವಿ.ಪ.ಸದಸ್ಯ
ಪರವಾಗಿಲ್ಲ, ಹಾಲಿ ಕತ್ತೆಗಿಂತ ವಾಸಿ ಎಂದರಂತೆ.


ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ತೋರುವ ರಾಷ್ಟ್ರಗಳಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲು ಭಾರತ ಸಿದ್ಧವಿದೆ
- ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ
ಸದ್ಯಕ್ಕೆ ಅವರು ಗೋರಕ್ಷಣೆ ಹೇಗೆ ಮಾಡಬಾರದು ಎನ್ನುವುದನ್ನು ಭಾರತದಿಂದ ಕಲಿಯುತ್ತಿದ್ದಾರೆ.


ರಾಮ ರಾಜ್ಯಕ್ಕಾಗಿ 'ಅಪರೇಶನ್ ಕಮಲ'ಕ್ಕೂ ಸಿದ್ಧ - ನಳಿನ್ ಕುಮಾರ್ ಕಟೀಲು, ಸಂಸದ

ರಾಮನ ಕಾಲದ 'ಆಪರೇಶನ್ ವಿಭೀಷಣ' ನೆನಪಿಗೆ ಬಂದಿರಬೇಕು.


ಶಾಸಕ ತಿಪ್ಪಾರೆಡ್ಡಿ ಮತ್ತು ನಾನು ಸಚಿವರಾಗುವ ದಿನಗಳು ದೂರವಿಲ್ಲ - ಉಮೇಶ್ ಕತ್ತಿ, ಶಾಸಕ

ಕತ್ತಿಯನ್ನು ಇನ್ನಷ್ಟು ಹರಿತ ಮಾಡಿ.


ಶ್ರೀರಾಮ, ಹಿಂದುತ್ವ ಈ ದೇಶದ ಆಸ್ತಿಯೇ ಹೊರತು ಬಿಜೆಪಿಯ ಸ್ವತ್ತಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಧ್ವಂಸಗೊಂಡ ಸಂವಿಧಾನ ಯಾರ ಸೊತ್ತು?


ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯರ ಒಪ್ಪಿಗೆಯ ಮೇರೆಗೆ ಆಗುತ್ತಿದೆ - ಕಮಲ್‌ನಾಥ್, ಕಾಂಗ್ರೆಸ್ ಮುಖಂಡ

ಬಾಬರಿ ಮಸೀದಿ ಮತ್ತು ಸಂವಿಧಾನ ಧ್ವಂಸ ಕಾಂಗ್ರೆಸ್ ಒಪ್ಪಿಗೆಯ ಮೇರೆಗೆ ನಡೆದಿರುವುದು ಎನ್ನುವುದು ದೇಶಕ್ಕೇ ಗೊತ್ತು.


ಕೆಲಸ ಹುಡುಕುವವರ ಬದಲು ಕೆಲಸ ಕೊಡುವವರನ್ನು ಸೃಷ್ಟಿಸುವುದೇ ಹೊಸ ಶಿಕ್ಷಣ ನೀತಿಯ ಮೂಲ ಆಶಯ
 - ನರೇಂದ್ರ ಮೋದಿ, ಪ್ರಧಾನಿ
ಕೆಲಸ ಕೊಡಬೇಕಾದರೆ, ಮೊದಲು ಏನಾದರೂ ಒಂದು ಕೆಲಸ ಮಾಡಬೇಕಲ್ಲವೇ?


ಕೇಂದ್ರ ಸರಕಾರವು ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ -ರಮೇಶ್ ಪೋಖ್ರಿಯಾಲ್, ಕೇಂದ್ರ ಸಚಿವ
 ಹೇರುವುದಕ್ಕೆ ರಾಜ್ಯವೇನು ಕತ್ತೆಯೇ?


ಕೊರೋನ ಹೆಸರಲ್ಲಿ ದುಡ್ಡು ಹೊಡೆದಿರುವುದೇ ಯಡಿಯೂರಪ್ಪ ಸರಕಾರದ ಸಾಧನೆ - ಡಾ.ಜಿ.ಪರಮೇಶ್ವರ್, ಮಾಜಿ ಉಪ ಮುಖ್ಯಮಂತ್ರಿ

 ಅದರಲ್ಲಿ ಪಾಲು ಹಂಚಿಕೊಂಡಿರುವುದು ನಿಮ್ಮ ಸಾಧನೆಯಾಗಿರಬೇಕು.


ನಮ್ಮತನ ಕಾಣಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಿದೆ
 - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಜಾತೀಯತೆಯಲ್ಲಿ ನಮ್ಮತನವೇ?


ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು - ವಿ.ಸೋಮಣ್ಣ , ಸಚಿವ

ಸದ್ಯಕ್ಕೆ ಕಲ್ಲುಗಳ ನಡುವೆ ಮೊಸರು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.


ಸಾಧಕರನ್ನು ಸೃಷ್ಟಿಸುವ ಮತ್ತು ದೇಶದ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ
-ನಳಿನ್ ಕುಮಾರ್ ಕಟೀಲು, ಸಂಸದ

ಸಮಯ ಸಾಧಕರನ್ನು ಸೃಷ್ಟಿಸುವ ಎಂದರೆ ಚೆನ್ನಾಗಿರುತ್ತದೆ.


ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಹಿಡಿಯುವುದೇ ಮುಖ್ಯವಾಗಿದೆ
-ದೇವೇಗೌಡ, ಮಾಜಿ ಪ್ರಧಾನಿ
ಅಧಿಕಾರ ನಿಮಗೆ ಬೇಡವೇ?


ಪಕ್ಷದ ಪೋಸ್ಟರ್ ಅಂಟಿಸುತ್ತಿದ್ದ ಕಾರ್ಯಕರ್ತ ಅಮಿತ್ ಶಾ ದೇಶದ ಗೃಹ ಸಚಿವರಾಗುವುದು ಬಿಜೆಪಿಯಂತಹ ಕಾರ್ಯಕರ್ತರ ಪಕ್ಷದಲ್ಲಿ ಮಾತ್ರ ಸಾಧ್ಯ
- ಪ್ರತಾಪ ಸಿಂಹ, ಸಂಸದ

ಆತ ಪೋಸ್ಟರ್ ಅಂಟಿಸುತ್ತಲೇ ಇದ್ದಿದ್ದರೆ ದೇಶಕ್ಕೆ ದೊಡ್ಡ ಉಪಕಾರವಾಗುತ್ತಿತ್ತು.


ಹಿರಿತನಕ್ಕೆ, ಸಂಸ್ಕಾರಕ್ಕೆ, ಪರಂಪರೆಗೆ ಕಾಲು ಹಿಡಿಯುವುದು ತಪ್ಪಲ್ಲ
 - ಸಿ.ಟಿ.ರವಿ, ಸಚಿವ
 ಹಾಗೆಂದು ಕತ್ತೆಯ ಕಾಲು ಹಿಡಿಯುವುದು ಸರಿಯೇ?

share
ಪಿ.ಎ.ರೈ
ಪಿ.ಎ.ರೈ
Next Story
X