Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಾಲಿಗೆಯಲ್ಲಿ ಗುಳ್ಳೆಗಳಾಗಿವೆಯೇ?: ಅವು...

ನಾಲಿಗೆಯಲ್ಲಿ ಗುಳ್ಳೆಗಳಾಗಿವೆಯೇ?: ಅವು ಸೋಂಕನ್ನುಂಟು ಮಾಡುವ ಮುನ್ನ ಗುಣಪಡಿಸಿಕೊಳ್ಳಿ

ವಾರ್ತಾಭಾರತಿವಾರ್ತಾಭಾರತಿ9 Aug 2020 11:45 PM IST
share

ಪ್ರತಿಯೊಬ್ಬರೂ ತಮ್ಮ ಜೀವಿತದ ಒಂದಲ್ಲೊಂದು ಸಂದರ್ಭದಲ್ಲಿ ನಾಲಿಗೆಯಲ್ಲಿ ಗುಳ್ಳೆಗಳ ಕಿರುಕುಳವನ್ನು ಅನುಭವಿಸಿರುತ್ತಾರೆ. ಒಂದು ಗುಳ್ಳೆಯಾಗಿರಬಹುದು ಅಥವಾ ಗುಳ್ಳೆಗಳ ಸಮೂಹವೇ ಇರಬಹುದು,ತೀವ್ರ ಕಿರಿಕಿರಿಯನ್ನುಂಟು ಮಾಡುತ್ತವೆ. ಏನನ್ನಾದರೂ ಸೇವಿಸಿದಾಗ ಅಥವಾ ತಿಂದಾಗ ನೋವು ತೀವ್ರಗೊಳ್ಳುತ್ತದೆ. ಈ ಗುಳ್ಳೆಗಳು ಸಾಮಾನ್ಯವಾಗಿ ಹಾನಿಕಾರಕವಲ್ಲ,ಆದರೆ ಕೆಲವೊಮ್ಮೆ ಶರೀರದಲ್ಲಿಯ ಸೋಂಕು ಈ ಗುಳ್ಳೆಗಳಿಗೆ ಕಾರಣವಾಗಿರುತ್ತದೆ. ಅವು ಇನ್ನಷ್ಟು ತೊಂದರೆಯನ್ನುಂಟು ಮಾಡುವ ಮೊದಲೇ ಚಿಕಿತ್ಸೆ ಪಡೆಯುವುದು ಉತ್ತಮ.

ಸಾಮಾನ್ಯವಾಗಿ ಕೆಲವೇ ದಿನಗಳಲ್ಲಿ ಗುಳ್ಳೆಗಳು ಮಾಯವಾಗುತ್ತವೆ. ಆದರೆ ಗುಳ್ಳೆಗಳ ಕಿರಿಕಿರಿ ಮುಂದುವರಿದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಹಾಗೆ ಮಾಡುವುದಕ್ಕಿಂತ ಮುನ್ನ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.

ಕಾರಣಗಳು:ನಾಲಿಗೆಯಲ್ಲಿ ಗುಳ್ಳೆಗಳುಂಟಾಗಲು ಹಲವಾರು ಕಾರಣಗಳಿವೆ.

ಆಕಸ್ಮಿಕವಾಗಿ ಬಿಸಿ ಆಹಾರ ಅಥವಾ ಪಾನೀಯ ಸೇವನೆಯಿಂದ ಬಾಯಿ ಸುಡುವುದು ಅಥವಾ ನಾಲಿಗೆ ಕಚ್ಚಿಕೊಳ್ಳುವುದು, ಬಾಯಿ ಹುಣ್ಣು ಅಥವಾ ಯೀಸ್ಟ್ ಸೋಂಕು,ಬಾಯಿಯ ಅಲ್ಸರ್,ನರೂಲಿ ಮತ್ತು ಅಲರ್ಜಿಗಳು,ಚರ್ಮದ ಕೆರಳುವಿಕೆಯಿಂದಾಗುವ ಉರಿಯೂತ, ಅತಿಯಾದ ಧೂಮ್ರಪಾನ, ಕ್ಯಾನ್ಸರ್, ಲುಕೋಪ್ಲಾಕಿಯಾ ಮತ್ತು ಸ್ಟೊಮಾಟೈಟಿಸ್‌ನಂತಹ ಕಾಯಿಲೆಗಳು ಇಂತಹ ಕೆಲವು ಸಾಮಾನ್ಯ ಕಾರಣಗಳಾಗಿವೆ.

ಕೆಲವು ಮನೆಮದ್ದುಗಳನ್ನು ಬಳಸಿ ನಾಲಿಗೆಯಲ್ಲಿನ ಗುಳ್ಳೆಗಳಿಂದ ಮುಕ್ತಿ ಪಡೆಯಬಹುದು

ತೆಂಗಿನೆಣ್ಣೆ: ಆಯಿಲ್ ಪುಲ್ಲಿಂಗ್ ಶರೀರದ ಆರೋಗ್ಯವನ್ನು ಕಾಯ್ದುಕೊಳ್ಳಲು ಬಳಕೆಯಾಗುತ್ತಿರುವ ಪ್ರಾಚೀನ ವಿಧಾನವಾಗಿದೆ. ಬೆಳಿಗ್ಗೆ ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿಕೊಂಡು ಕೆಲವು ನಿಮಿಷಗಳ ಕಾಲ ಮುಕ್ಕಳಿಸುವುದರಿಂದ ಗುಳ್ಳೆಗಳ ನಿವಾರಣೆ ಸೇರಿದಂತೆ ಬಾಯಿಗೆ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ. ಆಯಿಲ್ ಪುಲ್ಲಿಂಗ್ ಬದಲು ಹತ್ತಿಯ ತುಂಡಿನಿಂದ ತೆಂಗಿನೆಣ್ಣೆಯನ್ನು ಗುಳ್ಳೆಗಳಿಗೆ ಲೇಪಿಸಿದರೂ ತೊಂದರೆ ನಿವಾರಣೆಯಾಗುತ್ತದೆ.

 ಲವಂಗದ ಎಣ್ಣೆ: ಹಲವಾರು ಬಾಯಿ ಸಮಸ್ಯೆಗಳಿಗೆ ಲವಂಗದ ಎಣ್ಣೆ ರಾಮಬಾಣವಾಗಿದೆ. ಹಲ್ಲುನೋವಿರಲಿ ಅಥವಾ ದಂತಕುಳಿಗಳ ಸಮಸ್ಯೆಯಿರಲಿ,ಈ ಮನೆಮದ್ದು ಎಂದಿಗೂ ವಿಫಲಗೊಳ್ಳುವುದಿಲ್ಲ. ಕೆಲವು ಹನಿ ಲವಂಗದೆಣ್ಣೆಯನ್ನು ನೀರಿಗೆ ಬೆರೆಸಿಕೊಂಡು ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸಿದರೆ ನಾಲಿಗೆಯಲ್ಲಿನ ಗುಳ್ಳೆಗಳು ಮಾಯವಾಗುತ್ತವೆ.

ಟೀ ಟ್ರೀ ಆಯಿಲ್: ಟೀ ಟ್ರೀ ಆಯಿಲ್ ಬಾಯಿಯ ಶಿಲೀಂಧ್ರ ಸೋಂಕನ್ನು ತಡೆಯುವ ‘ಟರ್ಪಿನಿನ್-4-ಒಎಲ್’ ಎಂಬ ಉರಿಯೂತ ನಿರೋಧಕವನ್ನು ಒಳಗೊಂಡಿದೆ ಮತ್ತು ಇದು ನಾಲಿಗೆಯಲ್ಲಿನ ಗುಳ್ಳೆಗಳನ್ನು ನಿವಾರಿಸಲೂ ನೆರವಾಗುತ್ತದೆ. 3-4 ಹನಿ ಟೀ ಟ್ರೀ ಆಯಿಲ್‌ನ್ನು ನೀರಿನಲ್ಲಿ ಬೆರೆಸಿಕೊಂಡು ದಿನಕ್ಕೆರಡು ಬಾರಿಯಂತೆ ಒಂದು ವಾರ ಬಾಯಿ ಮುಕ್ಕಳಿಸಿದರೆ ಗುಳ್ಳೆಗಳು ನಿವಾರಣೆಯಾಗುತ್ತವೆ.

 ಉಪ್ಪುನೀರು: ಉಪ್ಪುಮಿಶ್ರಿತ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು ನಾಲಿಗೆಯಲ್ಲಿನ ಗುಳ್ಳೆಗಳು ಮಾತ್ರವಲ್ಲ,ಬಾಯಿ ಹುಣ್ಣುಗಳು, ಗಂಟಲಿನ ಕಿರಿಕಿರಿ ಮತ್ತು ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರಿನ್ ಗುಳ್ಳೆಗಳನ್ನು ಕಡಿಮೆ ಮಾಡುತ್ತವೆ ಮತ್ತು ನೋವನ್ನು ಕನಿಷ್ಠಗೊಳಿಸುತ್ತವೆ.

 ವಿಟಾಮಿನ್ ಬಿ ಪೂರಕ: ಶರೀರದಲ್ಲಿ ವಿಟಾಮಿನ್ ಬಿ ಕೊರತೆಯಿಂದಲೂ ಗುಳ್ಳೆಗಳು ಉಂಟಾಗುತ್ತವೆ ಎನ್ನುವದು ಹೆಚ್ಚಿನವರಿಗೆ ಗೊತ್ತಿಲ್ಲ. ನಾಲಿಗೆಯಲ್ಲಿಹಲವಾರು ಗುಳ್ಳೆಗಳಾಗಿದ್ದರೆ ಮೊಟ್ಟೆ,ಇಡಿಯ ಧಾನ್ಯ,ಓಟ್ಸ್,ಚೀಸ್‌ನಂತಹ ವಿಟಾಮಿನ್ ಬಿ ಸಮೃದ್ಧ ಆಹಾರಗಳ ಸೇವನೆ ಉತ್ತಮ ಪರಿಣಾಮವನ್ನು ನೀಡುತ್ತದೆ.

                  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X