ಮಂಗಳೂರು: ವಿವಿಧ ಸಂಟನೆಗಳಿಂದ ‘ದೇಶ ಉಳಿಸಿ ದಿನಾಚರಣೆ’ ಕಾರ್ಯಕ್ರಮ
ಮಂಗಳೂರು, ಆ.11: ಕೋವಿಡ್-19 ಸಮರ್ಥ ನಿಯಂತ್ರಣಕ್ಕಾಗಿ, ಎಪಿಎಂಸಿ ಮತ್ತು ಭೂ ಸುಧಾರಣೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿಗಳ ವಾಪಸ್ಗಾಗಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳ ವಿರುದ್ದ, ನೂತನ ಶಿಕ್ಷಣ ನೀತಿ ಕೈ ಬಿಡಬೇಕು. ಪ್ರತೀ ಕುಟುಂಬಕ್ಕೆ ಮಾಸಿಕ 7,500 ರೂ. ನೇರ ನಗದು ವರ್ಗಾವಣೆ ಹಾಗೂ 10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆಗಾಗಿ, ಮಹಿಳೆಯರು,ದಲಿತರು,ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗಾಗಿ, ಉಪಕರಣ ಖರೀದಿ ಹಗರಣದ ಸಮಗ್ರ ತನಿಖೆಗಾಗಿ, ರೈತ ಕಾರ್ಮಿಕರಿಂದ ದೇಶಾದ್ಯಂತ ಹಮ್ಮಿಕೊಂಡ ‘ದೇಶ ಉಳಿಸಿ ದಿನಾಚರಣೆ’ಯ ಅಂಗವಾಗಿ ಸೋಮವಾರ ಮಂಗಳೂರು ಮಿನಿ ವಿಧಾನಸೌಧದ ಎದುರು ಕಾರ್ಯಕ್ರಮ ನಡೆಯಿತು.
ಐಟಕ್, ಸಿಐಟಿಯು, ಇಂಟಕ್, ಎಚ್ಎಂಎಸ್, ಎಐಕೆಎಸ್, ಎಸ್ಎಫ್ಐ, ಡಿವೈಎಫ್ಐ, ಜೆಎಂಎಸ್, ಡಿಎಚ್ಎಸ್, ಸಮಯದಾಯ ಸಂಘಟನೆ ಗಳು ಹಮ್ನಿಕೊಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ವಾಸುದೇವ ಉಚ್ಚಿಲ್,ಐಟಕ್ ಮುಖಂಡ ಸೀತಾರಾಮ ಬೇರಿಂಜ, ಸಿಐಟಿಯು ಮುಖಂಡ ಜೆ.ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ನಾಯಕ ಮುನೀರ್ ಕಾಟಿಪಳ್ಳ, ಎಸ್ಎಫ್ಐ ನಾಯಕಿ ಮಾಧುರಿ ಬೋಳಾರ ಮಾತನಾಡಿದರು.
ಹೋರಾಟದ ನೇತೃತ್ವವನ್ನು ಸಿಐಟಿಯು ನಾಯಕರಾದ ಸುನಿಲ್ ಕುಮಾರ್ ಬಜಾಲ್, ಬಾಬು ದೇವಾಡಿಗ, ದಿನೇಶ್ ಶೆಟ್ಟಿ, ದಯಾನಂದ ಶೆಟ್ಟಿ, ಸಂತೋಷ್ ಆರ್.ಎಸ್, ಐಟಕ್ ಮುಖಂಡರಾದ ವಿ.ಕುಕ್ಯಾನ್, ಕರುಣಾಕರ್, ಸುಧಾಕರ್, ಮಹಿಳಾ ಸಂಘಟನೆಯ ನಾಯಕಿಯರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಸುಲೋಚನಾ, ರೇಣುಕಾ, ಚಿತ್ರಾ, ಪ್ರಮೀಳಾ ದೇವಾಡಿಗ, ಡಿವೈಎಫ್ಐ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು, ಪ್ರಶಾಂತ್ ಉರ್ವಾಸ್ಟೋರ್, ಎಸ್ಎಫ್ಐ ನಾಯಕರಾದ ವಿಕಾಸ್ ಕುತ್ತಾರ್, ದಲಿತ ಸಂಘಟನೆಯ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಸಮುದಾಯದ ನಾಯಕ ಯಶವಂತ ಮರೋಳಿ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ವಿನ್ಸೆಂಟ್ ಡಿಸೋಜ ವಹಿಸಿದ್ದರು.